ADVERTISEMENT

ಕೇಂದ್ರದಿಂದ ರೈತರಿಗೆ ವಿಶ್ವಾಸದ್ರೋಹ: ಬೃಂದಾ ಕಾರಟ್

ಪಿಟಿಐ
Published 13 ಫೆಬ್ರುವರಿ 2024, 11:38 IST
Last Updated 13 ಫೆಬ್ರುವರಿ 2024, 11:38 IST
ಬೃಂದಾ ಕಾರಟ್‌
ಬೃಂದಾ ಕಾರಟ್‌   

ರಾಂಚಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ವಿಶ್ವಾಸದ್ರೋಹ ಬಗೆಯುತ್ತಿದೆ ಮತ್ತು ಅವರ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಸಿಪಿಎಂ ಹಿರಿಯ ನಾಯಕಿ ಬೃಂದಾ ಕಾರಟ್‌ ಮಂಗಳವಾರ ಕಿಡಿಕಾರಿದರು.

ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದ ಸಾವಿರಾರು  ರೈತರನ್ನು ಅಧಿಕಾರಿಗಳು ಗಡಿಗಳಲ್ಲಿ ತಡೆದ ಬೆನ್ನಲ್ಲೇ ಈ ಹೇಳಿಕೆ ನೀಡಿದರು.

‘ಅವರು (ಕೇಂದ್ರ ಸರ್ಕಾರ) ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಏಕೆ ಹೇಳುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ, ‘ಕೇಂದ್ರ ಸರ್ಕಾರವು  ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್‌ ಅವರಿಗೆ ಬಹಳ ತಡವಾಗಿ ಭಾರತ ರತ್ನ ಘೋಷಿಸಿತು. ಅವರು ರೈತರ ಹಕ್ಕುಗಳ ಪರವಾಗಿದ್ದರು. ಅನ್ನದಾತರ ಅನುಕೂಲಕ್ಕಾಗಿ ಅವರ ನೇತೃತ್ವದ ಆಯೋಗವು ನೀಡಿದ್ದ ಶಿಫಾರಸುಗಳನ್ನು ಇನ್ನೂ ಜಾರಿ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.