ADVERTISEMENT

ನಿವೃತ್ತಿ ನಂತರದ ಪ್ರಯೋಜನಗಳಿಗಾಗಿ ಕೊಚ್ಚಾರ್‌ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 12:38 IST
Last Updated 10 ನವೆಂಬರ್ 2022, 12:38 IST
ಚಂದ್ರಾ ಕೊಚ್ಚಾರ್‌
ಚಂದ್ರಾ ಕೊಚ್ಚಾರ್‌   

ಮುಂಬೈ (ಪಿಟಿಐ): ಐಸಿಐಸಿಐ ಬ್ಯಾಂಕ್‌ನ ಸಿಇಒ ಹುದ್ದೆಯಿಂದ ಚಂದಾ ಕೊಚ್ಚಾರ್‌ ಅವರನ್ನು ವಜಾಗೊಳಿಸಿದ್ದು ಮೇಲ್ನೋಟಕ್ಕೆ ಊರ್ಜಿತ ಎಂದು ತೋರುತ್ತದೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್‌, ನಿವೃತ್ತಿ ನಂತರದ ಪ್ರಯೋಜಗಳನ್ನು ಕೋರಿ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದೆ.

2018ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ 6.90 ಲಕ್ಷ ಷೇರುಗಳ ವ್ಯವಹಾರವನ್ನು ನಡೆಸದಂತೆ ಮತ್ತುಈಗ ನಡೆಸಿರುವ ವ್ಯವಹಾರಗಳ ಕುರಿತು ಮುಂದಿನ ಆರು ತಿಂಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆಯೂ ನ್ಯಾಯಾಧೀಶ ಆರ್‌.ಐ. ಚಗ್ಲಾ ಅವರಿದ್ದ ಏಕಸದಸ್ಯ ಪೀಠವು ಚಂದಾ ಅವರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT