ADVERTISEMENT

ಆರ್ಥಿಕತೆ, ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲ: ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2021, 2:08 IST
Last Updated 16 ಅಕ್ಟೋಬರ್ 2021, 2:08 IST
ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ
ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ   

ಬೆಂಗಳೂರು: ರಾಷ್ಟ್ರದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ 'ವಿಕಾಸ' ತರುವಲ್ಲಿ ವಿಫಲವಾಗಿದೆ ಎಂಬುದುಸಾಬೀತಾಗಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಲಡಾಖ್‌ನಲ್ಲಿ ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿಯೂ ಕೇಂದ್ರ ಸರ್ಕಾರವನ್ನು ಸ್ವಾಮಿಟೀಕಿಸಿದ್ದಾರೆ. 'ಲಡಾಖ್‌ನಲ್ಲಿನ ನಮ್ಮ ರಕ್ಷಣಾ ನೀತಿಯನ್ನು ಗಮನಿಸಿದರೆ ಅದು, ಹಿಮಾಲಯದಂಥವೈಫಲ್ಯದಂತೆ ಕಾಣುತ್ತಿದೆ' ಎಂದಿದ್ದಾರೆ.

'ವಿಫಲಗೊಂಡಿರುವ ನೀತಿಗಳನ್ನು ರೀಸೆಟ್‌ (ಸರಿಪಡಿಸಲು)ಮಾಡಲು, ಸಹಾಯಕ್ಕೆ ನಾನು ಸಿದ್ಧನಿದ್ದೇನೆ,’ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.ಆದರೆ, ಅದಕ್ಕೆ ಸೊಕ್ಕು ಅಡ್ಡಿಯಾಗಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ADVERTISEMENT

'ರೀಸೆಟ್‌: ರಿಗೈನಿಂಗ್‌ ಇಂಡಿಯಾಸ್‌ ಎಕಾನಮಿಕ್‌ ಲೆಗಸಿ' ಇದು 2019ರಲ್ಲಿ ಬಿಡುಗಡೆಯಾದ ಸುಬ್ರಮಣಿಯನ್‌ ಸ್ವಾಮಿ ಅವರ ಪುಸ್ತಕ. ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಕೃತಿಯಲ್ಲಿಸಲಹೆಗಳನ್ನು ನೀಡಿರುವುದಾಗಿ ಟ್ವಿಟರ್‌ನಲ್ಲಿ ಪ್ರಶ್ನೆಯೊಂದಕ್ಕೆ ಅವರುಪ್ರತಿಕ್ರಿಯಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಸಲಹೆ ನೀಡುವುದು ಮಾತ್ರವಲ್ಲ, ಸರ್ಕಾರಕ್ಕೆ ನೇರವಾಗಿ ಸಲಹೆ ನೀಡುವುದು ಉತ್ತಮ’ ಎಂದು ಟ್ವಿಟರ್‌ ಬಳಕೆದಾರ ಕುಮಾರ್‌ ರಜ್‌ಪೂತ್‌ ಎಂಬುವವರು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಕಮೆಂಟ್‌ ಮೂಲಕ ತಿಳಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, '2014ರಿಂದ 2019ರ ವರೆಗೆ ಈ ಕೆಲಸವನ್ನು ಮಾಡಿದ್ದೇನೆ,’ ಎಂದು ತಿಳಿಸಿದ್ದಾರೆ.

ಇದೇ ವೇಳೆ 'ಹಿಂದುಗಳ ರಕ್ಷಣೆಯನ್ನು ಸರ್ಕಾರ ಮಾಡುತ್ತದೆ' ಎಂಬ ಕಮೆಂಟ್‌ ಒಂದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, 'ಅಮಿತ್‌ ಶಾ ಅವರ ಕೃಪಾಕಟಾಕ್ಷದಿಂದಉತ್ತರಾಖಂಡದಲ್ಲಿ ನಡೆಯುತ್ತಿರುವಬಿಜೆಪಿ ಸರ್ಕಾರ 52 ಪ್ರಮುಖ ದೇವಸ್ಥಾನಗಳನ್ನು(ಬಹುತೇಕ ಶೇಕಡಾ 100ರಷ್ಟು) ಕೈಬಿಟ್ಟಿದೆ. ಇದು ಹಿಂದುಗಳ ನೈತಿಕತೆಯನ್ನು ಕುಗ್ಗಿಸುವಂಥದ್ದು,‘ ಎಂದು ಅವರು ಕಿಡಿಕಾರಿದ್ದಾರೆ.

ಉತ್ತರಾಖಂಡದ ‘ಚಾರ್ ಧಾಮ್ ದೇವಸ್ಥಾನಮಂಡಳಿ’ಯ ನಿಯಂತ್ರಣದಿಂದ51 ದೇವಾಲಯಗಳ ನಿರ್ವಹಣೆಯನ್ನು ಕೈಬಿಡಲಾಗಿತ್ತು. ಉತ್ತರಾಖಂಡಸರ್ಕಾರದ ಈ ನಿರ್ಧಾರವು ಟೀಕೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.