ADVERTISEMENT

ಆಂಧ್ರಪ್ರದೇಶ: 21 ದಿನ ಬಸ್‌ ಯಾತ್ರೆ ನಡೆಸಲಿರುವ ಸಿ.ಎಂ ಜಗನ್‌

ಪಿಟಿಐ
Published 18 ಮಾರ್ಚ್ 2024, 12:51 IST
Last Updated 18 ಮಾರ್ಚ್ 2024, 12:51 IST
<div class="paragraphs"><p>ಆಂಧ್ರಪ್ರದೇಶದ ಬಾಪಟ್ಲಾದಲ್ಲಿ ಭಾನುವಾರ ವೈಎಸ್‌ಆರ್‌ಸಿ‍ಪಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಕಾರ್ಯಕರ್ತರತ್ತ ಕೈಬೀಸಿದರು</p></div>

ಆಂಧ್ರಪ್ರದೇಶದ ಬಾಪಟ್ಲಾದಲ್ಲಿ ಭಾನುವಾರ ವೈಎಸ್‌ಆರ್‌ಸಿ‍ಪಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಕಾರ್ಯಕರ್ತರತ್ತ ಕೈಬೀಸಿದರು

   

ಪಿಟಿಐ ಚಿತ್ರ 

ಅಮರಾವತಿ: ವೈಎಸ್‌ಆರ್‌ಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಪ್ರಚಾರಕ್ಕಾಗಿ ರಾಜ್ಯದಾದ್ಯಂತ 21 ದಿನಗಳ ಕಾಲ ಬಸ್‌ ಯಾತ್ರೆ ಕೈಗೊಳ್ಳಲಿದ್ದಾರೆ.

ADVERTISEMENT

ಇದೇ  26 ಅಥವಾ 27ರಂದು ಈ ಯಾತ್ರೆ ಆರಂಭವಾಗಲಿದೆ. ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ.

‘ಚುನಾವಣಾ ಪ್ರಚಾರದ ಭಾಗವಾಗಿ ಜಗನ್ ಮೋಹನ್ ರೆಡ್ಡಿ ಅವರು ಬಸ್ ಯಾತ್ರೆ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಯಾತ್ರೆಯಲ್ಲಿ ಬೆಳಿಗ್ಗೆ ಜನರೊಂದಿಗೆ ಸಂವಾದ ಮತ್ತು ಮಧ್ಯಾಹ್ನ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿಯು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.