ADVERTISEMENT

'ರೇಡ್‌ ರಾಜ್‌’ಗೆ ಹೆದರುವುದಿಲ್ಲ: ರಣದೀಪ್‌ ಸುರ್ಜೆವಾಲ

ಪಿಟಿಐ
Published 22 ಜುಲೈ 2020, 10:27 IST
Last Updated 22 ಜುಲೈ 2020, 10:27 IST
ರಣದೀಪ್‌ ಸುರ್ಜೆವಾಲ
ರಣದೀಪ್‌ ಸುರ್ಜೆವಾಲ   

ಜೈಪುರ: ‘ಕೇಂದ್ರ ಸರ್ಕಾರವು ದೇಶದಲ್ಲಿ ‘ರೇಡ್‌ ರಾಜ್’ ನಿರ್ಮಿಸಿದೆ. ಇಂಥ ಬೆದರಿಕೆಗಳಿಗೆ ಕಾಂಗ್ರೆಸ್‌ ಜಗ್ಗುವುದಿಲ್ಲ’ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ಹೇಳಿದ್ದಾರೆ.

ಅಶೋಕ್‌ ಗೆಹ್ಲೋಟ್‌ ಅವರ ಸಹೋದರನ ಮನೆಯಲ್ಲಿ ಜಾರಿ ನಿರ್ದೇಶನಾಲವು ಬುಧವಾರ ಶೋಧ ನಡೆಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಉತ್ತರಪ್ರದೇಶದಲ್ಲಿ ‘ಗುಂಡಾರಾಜ್‌, ಜಂಗಲ್‌ರಾಜ್‌’ಇದೆ. ಮೋದಿ ಅವರು ಭಾರತದಲ್ಲಿ ರೇಡ್‌ ರಾಜ್‌ ನಿರ್ಮಿಸುತ್ತಿದ್ದಾರೆ. ಕಾಂಗ್ರೆಸ್‌ ಇದಕ್ಕೆ ಹೆದರುವುದಿಲ್ಲ. ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಬಿಜೆಪಿಯ ಉದ್ದೇಶ ಈಡೇರಲಿಲ್ಲ. ಅದಕ್ಕಾಗಿ ಈಗ ಇ.ಡಿ. ಶೋಧ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT