ADVERTISEMENT

ಮತ ಕಳವು ವಿರೋಧಿಸಿ ಮನೆ ಮನೆ ಅಭಿಯಾನಕ್ಕೆ ಯುವ ಕಾಂಗ್ರೆಸ್‌ ಚಾಲನೆ

ಪಿಟಿಐ
Published 16 ಆಗಸ್ಟ್ 2025, 12:47 IST
Last Updated 16 ಆಗಸ್ಟ್ 2025, 12:47 IST
   

ನವದೆಹಲಿ: ‘ಮತ ಕಳವು ನಿಲ್ಲಿಸಿ’ ಅಭಿಯಾನದ ಭಾಗವಾಗಿ ರಾಷ್ಟ್ರಾದ್ಯಾಂತ ಮನೆ ಮನೆ ಅಭಿಯಾನಕ್ಕೆ ಭಾರತೀಯ ಯುವ ಕಾಂಗ್ರೆಸ್(ಐವೈಸಿ) ಶನಿವಾರ ಚಾಲನೆ ನೀಡಿದೆ.

ಐವೈಸಿ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಛಿಬ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

‘ದೇಶದ ಪ್ರತಿ ಮತಗಟ್ಟೆಗಳಲ್ಲಿಯೂ ಮತದಾರ ಪಟ್ಟಿಯನ್ನು ಪರಿಶೀಲನೆ ನಡೆಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರಜಾಪ್ರಭುತ್ವಕ್ಕಾಗಿನ ಹೋರಾಟವು ಇದೀಗ ಪ್ರತಿ ಮತಗಟ್ಟೆಗೂ ತಲುಪಿದೆ’ ಎಂದು ಉದಯ್‌ ಭಾನು ತಿಳಿಸಿದ್ದಾರೆ.

ADVERTISEMENT

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಐವೈಸಿಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಧಿಕೃತ ಮತದಾರ ಪಟ್ಟಿಯಲ್ಲಿರುವ ಮಾಹಿತಿಯೊಂದಿಗೆ ಮತದಾರರ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮತ ಕಳವು ಪ್ರಕರಣಗಳನ್ನು ಯುವ ಕಾಂಗ್ರೆಸ್‌ ಬಯಲಿಗೆ ತರಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.