ನವದೆಹಲಿ: ಫಿಲಿಪ್ಪೀನ್ಸ್ ರಾಯಭಾರ ಕಚೇರಿ ಹಾಗೂ ನ್ಯೂಜಿಲೆಂಡ್ ಹೈಕಮಿಷನ್ ಕಚೇರಿಗೆ ಯೂಥ್ ಕಾಂಗ್ರೆಸ್ ಆಮ್ಲಜನಕ ಸಿಲಿಂಡರ್ಗಳನ್ನು ಪೂರೈಕೆ ಮಾಡಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಬಿ.ವಿ. ಶ್ರೀನಿವಾಸ್ ಅಧ್ಯಕ್ಷರಾಗಿರುವ ಯೂಥ್ ಕಾಂಗ್ರೆಸ್ನ ಈ ನಡೆಯನ್ನು ಖಂಡಿಸಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.
‘ಫಿಲಿಪ್ಪೀನ್ಸ್ ರಾಯಭಾರ ಕಚೇರಿಯಲ್ಲಿ ಯಾರೂ ಕೋವಿಡ್ನಿಂದ ಬಳಲುತ್ತಿಲ್ಲ. ಆ ಕಚೇರಿಗೆ ಆಮ್ಲಜನಕ ಸಿಲಿಂಡರ್ ನೀಡಿರುವ ಯೂಥ್ ಕಾಂಗ್ರೆಸ್ನ ನಡೆ ಅನಪೇಕ್ಷಿತ ಹಾಗೂ ಪ್ರಚಾರಕ್ಕಾಗಿ ಮಾಡಿದ ಯತ್ನ’ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ಪಕ್ಷದ ಯುವ ಘಟಕ ಮಾಡಿದ ಕಾರ್ಯವನ್ನು ತಮ್ಮ ಟ್ವೀಟ್ನಲ್ಲಿ ಪ್ರಸ್ತಾಪಿಸಿದ್ದ ಕಾಂಗ್ರೆಸ್ನ ಹಿರಿಯ ಮುಖಂಡ ಜೈರಾಮ್ ರಮೇಶ್, ‘ರಾಯಭಾರ ಕಚೇರಿಗಳ ಸಂಕಷ್ಟಕ್ಕೆ ಯೂಥ್ ಕಾಂಗ್ರೆಸ್ ಸ್ಪಂದಿಸಿದೆ. ವಿದೇಶಾಂಗ ಸಚಿವಾಲಯ ನಿದ್ದೆ ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.