ADVERTISEMENT

ಕೋವಿಡ್‌ ಪರಿಸ್ಥಿತಿ ಹಿನ್ನೆಲೆ: ತುರ್ತು ಪ್ರಕರಣಗಳಷ್ಟೇ ವಿಚಾರಣೆ –ದೆಹಲಿ ಕೋರ್ಟ್‌

ಪಿಟಿಐ
Published 18 ಏಪ್ರಿಲ್ 2021, 11:51 IST
Last Updated 18 ಏಪ್ರಿಲ್ 2021, 11:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ತೀವ್ರ ಏರಿಕೆ ಕಾರಣದಿಂದ 2021ರಲ್ಲಿ ದಾಖಲಾದ ‘ಅತ್ಯಂತ ತುರ್ತು’ ಪ್ರಕರಣಗಳನ್ನಷ್ಟೇ ವಿಚಾರಣೆಗೆ ಪರಿಗಣಿಸಲು ದೆಹಲಿ ಹೈಕೋರ್ಟ್‌ ತೀರ್ಮಾನಿಸಿದೆ. ಏಪ್ರಿಲ್‌ 19ರಿಂದ ಇದು ಜಾರಿಗೆ ಬರಲಿದೆ ಎಂದು ಭಾನುವಾರ ಆದೇಶ ಹೊರಡಿಸಿದೆ.

ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮನೋಜ್‌ ಜೈನ್ ಅವರು ಆದೇಶ ಹೊರಡಿಸಿದ್ದು, ಮಾರ್ಚ್ 22, 2020 ಮತ್ತು ಡಿಸೆಂಬರ್ 31, 2020ರ ಅವಧಿಯಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದ್ದ ತುರ್ತು ಅಲ್ಲದ ಪ್ರಕರಣಗಳನ್ನು ಸದ್ಯ ವಿಚಾರಣೆ ನಡೆಸುವುದಿಲ್ಲ. ಸಾರಾಸಗಟಾಗಿ ಅವುಗಳ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಪಟ್ಟಿ ಮಾಡಿದ್ದ ಪ್ರಕರಣಗಳಲ್ಲಿ ತುರ್ತು ಎಂಬುದು ಇದ್ದರೆ ಈ ಕುರಿತು ನಿಯೋಜಿತ ಲಿಂಕ್‌ ಮೂಲಕ ಮನವಿ ಸಲ್ಲಿಸಬಹುದಾಗಿದೆ. ಎಲ್ಲ ಪೀಠಗಳು ಏ. 19ರಿಂದ ಜಾರಿಗೆ ಬರುವಂತೆ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆಗೆ ಪರಿಗಣಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.