ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ಭಾರತದ ಜನರು ಒಟ್ಟಾಗಿ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಈ ಯುದ್ಧವು ಧರ್ಮ, ಜಾತಿ ಮತ್ತು ವರ್ಗಗಳ ನಡುವಿನ ಭಿನ್ನತೆಗಳನ್ನು ದೂರ ಮಾಡಿ ಜನರನ್ನು ಒಂದುಗೂಡಿಸಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮಾರಣಾಂತಿಕ ವೈರಸ್ ಅನ್ನು ಸೋಲಿಸುವುದು ಜನರ ಸಾಮೂಹಿಕ ಉದ್ದೇಶವಾಗಿದೆ. ಸಹಾನುಭೂತಿ, ಪರಾನುಭೂತಿ ಮತ್ತು ಸ್ವಯಂ ಸೇವೆ ಈ ಉದ್ದೇಶದಕೇಂದ್ರ ಕಲ್ಪನೆಯಾಗಿದೆ ಎಂದು ರಾಹುಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಏಕತೆಯ ಸಂದೇಶವನ್ನು ನೀಡುವುದರ ಮೂಲಕ ರಾಹುಲ್ ಗಾಂಧಿಯವರು ಅನ್ಯ ಧರ್ಮಗಳಿಗೆ ಸೇರಿದ ಇಬ್ಬರುಮಕ್ಕಳು ಪರಸ್ಪರ ಒಂದಾಗಿ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.