ADVERTISEMENT

ಮುಸ್ಲಿಂ ಲೀಗ್‌‌ ಕಾರ್ಯಕರ್ತನ ಹತ್ಯೆ

ಪಿಟಿಐ
Published 7 ಏಪ್ರಿಲ್ 2021, 23:23 IST
Last Updated 7 ಏಪ್ರಿಲ್ 2021, 23:23 IST

ಕಣ್ಣೂರು: ಕೇರಳ ವಿಧಾನಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನದ ನಂತರ, ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿದೆ. ಕಣ್ಣೂರಿನಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌)‌ ಯುವ ಕಾರ್ಯಕರ್ತ ಒಬ್ಬರು ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ. ರಾಜ್ಯದ ಹಲವೆಡೆ ಹಲವರು ಗಾಯಗೊಂಡಿದ್ದಾರೆ.

ಕಣ್ಣೂರಿನ ಚೊಕ್ಲಿಯಲ್ಲಿ ಮಂಗಳವಾರ ರಾತ್ರಿ 8ರ ಹೊತ್ತಿಗೆ ಹಿಂಸಾಚಾರ ನಡೆದಿದೆ. ಚೊಕ್ಲಿಯಲ್ಲಿನ ಮತಗಟ್ಟೆಯಲ್ಲಿ ಐಯುಎಂಎಲ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದ್ದ ಮನ್ಸೂರ್ (22) ಎಂಬ ಯುವಕನ ಮನೆ ಮೇಲೆ ಸಿಪಿಎಂನ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT