ADVERTISEMENT

ನವದೆಹಲಿ ಅಗ್ನಿ ಅವಘಡದಲ್ಲಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಕ್ರೇನ್ ಆಪರೇಟರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2022, 10:08 IST
Last Updated 15 ಮೇ 2022, 10:08 IST
ಅಗ್ನಿ ಅವಘಡಕ್ಕೆ ತುತ್ತಾದ ನವದೆಹಯ ಮುಂಡ್ಕಾ ವಾಣಿಜ್ಯ ಕಟ್ಟಡ
ಅಗ್ನಿ ಅವಘಡಕ್ಕೆ ತುತ್ತಾದ ನವದೆಹಯ ಮುಂಡ್ಕಾ ವಾಣಿಜ್ಯ ಕಟ್ಟಡ    

ನವದೆಹಲಿ: ಶುಕ್ರವಾರ ನವದೆಹಲಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಗಬಹುದಾದ ಹೆಚ್ಚಿನ ಜೀವ ಹಾನಿಯನ್ನು ಕ್ರೇನ್‌ ಆಪರೇಟರ್‌ ಒಬ್ಬರು ತಪ್ಪಿಸಿದ್ದಾರೆ.

ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ 50ಕ್ಕೂ ಹೆಚ್ಚು ಮಂದಿಯನ್ನು ಕ್ರೇನ್‌ ಆಪರೇಟರ್‌ ದಯಾನಂದ ತಿವಾರಿ ಎಂಬುವವರು ರಕ್ಷಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ‘ಎಎನ್‌ಐ’ ಶನಿವಾರ ವರದಿ ಮಾಡಿದೆ.

‘ನಾನು ಮುಂಡ್ಕ ಉದ್ಯೋಗ ನಗರದಿಂದ ಬರುತ್ತಿದ್ದಾಗ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ರೇನ್ ಸಹಾಯದಿಂದ ನಾವು ಸುಮಾರು 50-55 ಜನರನ್ನು ರಕ್ಷಿಸಿದೆವು. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ನಾವೆಲ್ಲ ರಕ್ಷಣಾ ಕಾರ್ಯ ಆರಂಭಿಸಿ ಒಂದೂವರೆ ಗಂಟೆ ನಂತರ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದವು’ ಎಂದು ಅವರು ಹೇಳಿದರು.

ನವದೆಹಯ ಮುಂಡ್ಕಾ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.