ADVERTISEMENT

ಸೈಬರ್ ಅ‍ಪರಾಧ ಹಿನ್ನೆಲೆಯ 11 ಲಕ್ಷ ಸಿಮ್‌ಗಳಿಗೆ ನಿರ್ಬಂಧ; ಸಚಿವ ಸಂಜಯ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 12:43 IST
Last Updated 16 ಡಿಸೆಂಬರ್ 2025, 12:43 IST
<div class="paragraphs"><p>ಸೈಬರ್ ವಂಚನೆ</p></div>

ಸೈಬರ್ ವಂಚನೆ

   

ನವದೆಹಲಿ: ದೇಶದಲ್ಲಿ ಸೈಬರ್ ಅ‍ಪರಾಧ ‍‍‍ಪ್ರಕರಣಗಳನ್ನು ನಿಯಂತ್ರಿಸಲು ಇಲ್ಲಿಯವರೆಗೆ 11.14 ಲಕ್ಷ ಸಿಮ್‌ ಕಾರ್ಡ್‌ಗಳು ಹಾಗೂ 2.96 ಲಕ್ಷ ಇಎಂಇಐಗಳನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ್ ತಿಳಿಸಿದ್ದಾರೆ. 

ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. 

ADVERTISEMENT

ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ಶಂಕಿತ ಸೈಬರ್ ಅ‍ಪರಾಧಿಗಳ ಗುರುತಿಸುವಿಕೆಯ ಪ್ರಕ್ರಿಯೆ ಆರಂಭಿಸಲಾಗಿದ್ದು, ಇಲ್ಲಿಯವರೆಗೆ 18.43 ಲಕ್ಷಕ್ಕೂ ಹೆಚ್ಚು ಶಂಕಿತರ ದತ್ತಾಂಶಗಳನ್ನು ಪತ್ತೆ ಹಚ್ಚಲಾಗಿದೆ.

ಈ ಮೂಲಕ, ₹8,031 ಕೋಟಿ ಮೊತ್ತ ಸೈಬರ್ ಅಪರಾಧಿಗಳ ಪಾಲಾಗುವುದನ್ನು ತಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.