ADVERTISEMENT

ಗುಜರಾತ್ | ದೌರ್ಜನ್ಯದ ಆರೋಪ: ದಲಿತ ಯುವಕ ಆತ್ಮಹತ್ಯೆ

ಪಿಟಿಐ
Published 14 ಜುಲೈ 2025, 23:46 IST
Last Updated 14 ಜುಲೈ 2025, 23:46 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಅಹಮದಾಬಾದ್: ಐವರು ಸವರ್ಣೀಯ ಯುವಕರು ತಮ್ಮಂತೆಯೇ ಬಟ್ಟೆ ಧರಿಸಿದ್ದಕ್ಕೆ ಅವಮಾನಿಸಿ, ಹಲ್ಲೆ ನಡೆಸಿದ್ದರಿಂದ ಮನನೊಂದು 19 ವರ್ಷದ ದಲಿತ ತರುಣರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ADVERTISEMENT

ಬನಾಸ್‌ಕಾಂಠಾ ಜಿಲ್ಲೆಯ ಬಾಸರ್ದಾ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 

ಅವಮಾನಿತರಾಗಿದ್ದ ಮಹೇಂದ್ರ ಕಾಲುಭಾಯಿ ಪರ್ಮಾರ್ ಜುಲೈ 10ರಿಂದ ನಾಪತ್ತೆಯಾಗಿದ್ದರು. 12ರಂದು ಬಾವಿಯೊಂದರಲ್ಲಿ ಅವರ ಶವ ದೊರಕಿತು. ಮೃತರ ಚಿಕ್ಕಪ್ಪ ನೀಡಿದ ದೂರಿನ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಸವರ್ಣೀಯರಿಂದ ದೌರ್ಜನ್ಯ ನಡೆದಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.