ಸಹರಣ್ಪುರ: ಉತ್ತರಪ್ರದೇಶದ ದೇವಬಂದ್ ಪ್ರದೇಶದ ದಲಿತ ಯುವಕನೊಬ್ಬನ ಶವವು ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೃತ ಯುವಕನನ್ನು ಸಾಗರ್ ಜೈನ್(24) ಎಂದು ಗುರುತಿಸಲಾಗಿದ್ದು, ಮಾಯಪುರ ಗ್ರಾಮದಲ್ಲಿ ಶವ ಪತ್ತೆಯಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಜೈನ್ ತಿಳಿಸಿದ್ದಾರೆ.
‘ನನ್ನ ಮಗನನ್ನು ಕೊಲೆ ಮಾಡಿ ಮರಕ್ಕೆ ನೇತುಹಾಕಲಾಗಿದೆ’ ಎಂದು ಮೃತ ಯುವಕನ ತಂದೆ ಯಶ್ಪಾಲ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಎಎಸ್ಪಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.