ADVERTISEMENT

ಬೌದ್ಧಧರ್ಮಕ್ಕೆ ದಲಿತರು ಮತಾಂತರ

ಪಿಟಿಐ
Published 12 ನವೆಂಬರ್ 2018, 15:55 IST
Last Updated 12 ನವೆಂಬರ್ 2018, 15:55 IST

ಮುಜಾಫರ್‌ನಗರ: ತಮ್ಮ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿರುವ 25 ದಲಿತರು, ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದಾರೆ.

‘ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿರುವುದಕ್ಕೆ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಮತಾಂತರಗೊಂಡ ದಲಿತರ ನಾಯಕ ದೇವಿದಾಸ್‌ ಜಯಂತ್‌ ಹೇಳಿದ್ದಾರೆ.

ಬೌದ್ಧ ಭಿಕ್ಷು ಭಾಂತೆ ಪರ್ಗ್ಯಶೀಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ADVERTISEMENT

‘ಯಾವುದೇ ದಬ್ಬಾಳಿಕೆ ಅಥವಾ ಒತ್ತಾಯದ ಕಾರಣದಿಂದ ದಲಿತರು ಮತಾಂತರವಾಗಿಲ್ಲ’ ಎಂದು ಹೇಳಿರುವ ಪೊಲೀಸ್‌ ಅಧಿಕಾರಿ ರಾಜೇಶ್‌ಕುಮಾರ್‌ ತಿವಾರಿ, ‘ಪ್ರತಿಯೊಬ್ಬರು ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.