ಉತ್ತರ ಪ್ರದೇಶ:ಜೆಡಿಎಸ್ ತೊರೆದು ಇತ್ತೀಚೆಗೆಬಿಎಸ್ಪಿ ಸೇರಿಉತ್ತರ ಪ್ರದೇಶದ ಅಮ್ರೋಹ್ ಕ್ಷೇತ್ರದಿಂದಸ್ಪರ್ಧಿಸಿದ್ದಕುನ್ವರ್ ಡ್ಯಾನಿಷ್ ಅಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ಯಾನಿಷ್ ಆಲಿ, ಸಮನ್ವಯ ಸಮಿತಿಯ ಪದಾಧಿಕಾರಿಯೂ ಆಗಿದ್ದರು.
ಕಾರಣಾಂತರಗಳಿಂದ ಜೆಡಿಎಸ್ ತೊರೆದು ಉತ್ತರಪ್ರದೇಶದಲ್ಲಿ ಮಾಯಾವತಿ ನೇತೃತ್ವದಲ್ಲಿ ಬಿಎಸ್ಪಿ ಸೇರಿ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಡ್ಯಾನಿಷ್ ಅಲಿ ಅವರನ್ನು ಜೆಡಿಎಸ್ ಚಿಹ್ನೆಯ ಮೇಲೆಯೇಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಸಬೇಕು ಎಂದು ದೇವೇಗೌಡರು ಬಯಸಿದ್ದರು. ಆದರೆ, ಉತ್ತರ ಪ್ರದೇಶದ ಜನರಿಗೆ ಜೆಡಿಎಸ್ಚಿಹ್ನೆಯ ಪರಿಚಯ ಇಲ್ಲದ ಕಾರಣಕ್ಕೆ ಡ್ಯಾನಿಷ್ ಅಲಿ ಬಿಎಸ್ಪಿ ಚಿಹ್ನೆಯಿಂದ ಸ್ಪರ್ಧಿಸಲಿ ಎಂದು ಮಾಯಾವತಿ ಅವರು ದೇವೇಗೌಡರಿಗೆ ತಿಳಿಸಿದ್ದರು ಎನ್ನಲಾಗಿತ್ತು. ಅದೇ ಮೇರೆಗೆ ಡ್ಯಾನಿಷ್ ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದರು. ಮಾಯಾವತಿ ಅವರ ಲೆಕ್ಕಾಚಾರ ಫಲಿಸಿದ್ದು, ಡ್ಯಾನಿಷ್ ಅಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.