ADVERTISEMENT

ದೆಹಲಿ: ಬೀದಿ ನಾಯಿ ಹೊಡೆದು ಕೊಂದ ಪೊಲೀಸ್‌ ಕಾನ್ಸ್‌ಟೇಬಲ್‌ ಬಂಧನ

ಪಿಟಿಐ
Published 7 ಮಾರ್ಚ್ 2022, 13:04 IST
Last Updated 7 ಮಾರ್ಚ್ 2022, 13:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೊಯ್ಡಾ: ತಾನು ಮತ್ತು ತಮ್ಮ ಕುಟುಂಬದವರು ಓಡಾಡುವ ವೇಳೆಯಲ್ಲೆ ಬೊಗಳುತ್ತದೆ ಎಂದು ಬೀದಿ ನಾಯಿಯನ್ನು ಬ್ಯಾಟ್‌ನಿಂದ ಹೊಡೆದು ಸಾಯಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ದೆಹಲಿ ಪೊಲೀಸ್‌ ಕಾನ್ಸ್‌ಟೇಬಲ್‌ ವಿನೋದ್‌ ಕುಮಾರ್‌ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ.

ನಾಯಿ ಕೊಂದ ಬಳಿಕ ಕಾನ್ಸ್‌ಟೇಬಲ್‌ ಮತ್ತು ಸ್ಥಳೀಯರ ನಡುವೆ ಗಲಾಟೆ ಆರಂಭವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು, ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್‌ 429ರಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ರಾತ್ರಿ ವೇಳೆ ನನ್ನ ಮಗನಿಗೆ ನಾಯಿ ಹೆದರಿಸಿತ್ತು. ಅದಕ್ಕಾಗಿ ಹೊಡೆದು ಕೊಂದೆ ಎಂದು ವಿನೋದ್‌ ಕುಮಾರ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.