ADVERTISEMENT

ದೆಹಲಿ ಅಬಕಾರಿ ನೀತಿ ಅಕ್ರಮ:  ಕೇಜ್ರಿವಾಲ್‌ ‘ಕಿಂಗ್‌ ಪಿನ್‌‘–ಠಾಕೂರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2023, 16:14 IST
Last Updated 11 ಮಾರ್ಚ್ 2023, 16:14 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ಪುಣೆ: ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ‘ಕಿಂಗ್‌ ಪಿನ್‌‘ ಆಗಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆರೋಪ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ವಿಜಯ್‌ ನಾಯರ್‌ ಹಾಗೂ ಕೇಜ್ರಿವಾಲ್‌ ಅವರಿಗೆ ಸಂಬಂಧ ಇರುವ ಬಗ್ಗೆ ತನಿಖೆಯಿಂದ ಗೊತ್ತಾಗಿದೆ. ಇದು ಯಾವ ರೀತಿಯ ಸಂಬಂಧ ಎಂಬುದನ್ನು ಕೇಜ್ರಿವಾಲ್‌ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಗರಣದಲ್ಲಿ ಮುಖ್ಯ ಆರೋಪಿ ಮನೀಶ್‌ ಸಿಸೋಡಿಯಾ ಆದರೆ ಕಿಂಗ್‌ ಪಿನ್‌ ಕೇಜ್ರಿವಾಲ್‌ ಎಂದರು. ಅಬಕಾರಿ ನೀತಿಯನ್ನು ಸಿದ್ಧಪಡಿಸಿದ್ದು ವಿಜಯ್‌ ನಾಯರ್‌ ಅವರೇ ಎಂದು ಪ್ರಶ್ನೆ ಮಾಡಿದರು. ವಿಜಯ್‌ ನಾಯರ್‌ ಅವರ ನಡುವಿನ ಸಂಬಂಧವನ್ನು ಕೇಜ್ರಿವಾಲ್‌ ಬಹಿರಂಗಪಡಿಸಬೇಕು ಎಂದರು.

ADVERTISEMENT

ಇದೇ ವೇಳೆ ಬಿಆರ್‌ಎಸ್‌ ಪಕ್ಷದ ಶಾಸಕಿ ಕವಿತಾ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು. ಕವಿತಾ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದು ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.