ADVERTISEMENT

ಉಗ್ರರಿಗೆ ಆಶ್ರಯ: ಡಿವೈಎಸ್‌ಪಿ ದೇವಿಂದರ್ ಸಿಂಗ್ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:06 IST
Last Updated 13 ಜನವರಿ 2020, 20:06 IST

ಶ್ರೀನಗರ : ಮೂವರು ಉಗ್ರರಿಗೆ ಆಶ್ರಯ ಒದಗಿಸಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್‌ ಅವರನ್ನು ಸೋಮವಾರ ಅಮಾನತು ಪಡಿಸಲಾಗಿದೆ.

ಸೇನೆಯ ಘಟಕದ ಮುಖ್ಯ ಕಚೇರಿ ಬಳಿಯ ತನ್ನ ಮನೆಯಲ್ಲೇ ಉಗ್ರರನ್ನು ಇರಿಸಿಕೊಂಡಿದ್ದುದು ತನಿಖೆಯಿಂದ ಗೊತ್ತಾಗಿದೆ. ಈ ಅಧಿಕಾರಿಗೆ ನಾಲ್ಕು ದಿನಗಳ ಹಿಂದಷ್ಟೇ ರಾಷ್ಟ್ರಪತಿಗಳ ಪದಕ ದೊರೆತಿತ್ತು.

ಪೊಲೀಸ್‌ ಮತ್ತು ಗುಪ್ತದಳದ ಅಧಿಕಾರಿಗಳು ಸತತವಾಗಿ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಅವರನ್ನು ಡಿವೈಎಸ್‌ಪಿ ಆಗಿ ನಿಯೋಜಿಸಿದ್ದ ಶ್ರೀನಗರ ವಿಮಾನನಿಲ್ದಾಣ ಬಳಿಯ ಕಚೇರಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.