ADVERTISEMENT

ಪ್ರತಿ ಗ್ರಾಮದಲ್ಲೂ ಆರ್‌ಎಸ್‌ಎಸ್‌ ಶಾಖೆ ಇರಬೇಕು: ಭಾಗವತ್

ಪಿಟಿಐ
Published 11 ಡಿಸೆಂಬರ್ 2022, 20:09 IST
Last Updated 11 ಡಿಸೆಂಬರ್ 2022, 20:09 IST
ಮೋಹನ ಭಾಗವತ್
ಮೋಹನ ಭಾಗವತ್   

ಗುವಾಹಟಿ: ದೇಶದ ಪ್ರತಿಯೊಂದು ಗ್ರಾಮದಲ್ಲಿಯೂ ಸಂಘದ ಶಾಖೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ ಭಾಗವತ್‌ ಭಾನುವಾರ ಹೇಳಿದರು.

ಸಂಘದ ಅಸ್ಸಾಂ ಘಟಕದ ಸ್ವಯಂ ಸೇವಕರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.‌

‘ಸಂಘದ ಪ್ರತಿಯೊಬ್ಬ ಸದಸ್ಯ ದೇಶದ ಪ್ರಗತಿಗೆ ಶ್ರಮಿಸಬೇಕು. ಜನರಲ್ಲಿ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಎಲ್ಲರ ಆದ್ಯತೆ ದೇಶವೇ ಆಗಿರಬೇಕು ಎಂಬುದಾಗಿ ಭಾಗವತ್‌ ಹೇಳಿದರು’ ಎಂದು ಆರ್‌ಎಸ್‌ಎಸ್‌ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಾಗಿರಬೇಕು. ಈ ಉದ್ದೇಶಕ್ಕಾಗಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಸಲುವಾಗಿಯೇ ಡಾ.ಕೇಶವ ಬಲಿರಾಮ್ ಹೆಡಗೇವಾರ್‌ ಅವರು 1925ರಲ್ಲಿ ಆರ್‌ಎಸ್‌ಎಸ್‌ ಸ್ಥಾಪಿಸಿದರು’ ಎಂದರು.

‘ದುರ್ಬಲ ಸಮಾಜವು ರಾಜಕೀಯ ಸ್ವಾತಂತ್ರ್ಯದ ಫಲವನ್ನು ಆಸ್ವಾದಿಸಲು ಸಾಧ್ಯವಿಲ್ಲ ಎಂಬುದಾಗಿ ಭಾಗವತ್‌ ಹೇಳಿದರು’ ಎಂದು ಪ್ರಕಟಣೆ ತಿಳಿಸಿದೆ.

ಆದರೆ, ‘ರಾಜಕೀಯ ಸ್ವಾತಂತ್ರ್ಯ’ವನ್ನು ಭಾಗವತ್ ಅವರು ಯಾವ ರೀತಿ ಅರ್ಥೈಸಿದರು ಎಂಬ ಬಗ್ಗೆ ಪ್ರಕಟಣೆಯಲ್ಲಿ ವಿವರಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.