ಏಕನಾಥ ಖಡ್ಸೆ
– ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿರುವ ಎನ್ಸಿಪಿ (ಎಸ್ಪಿ) ನಾಯಕ, ಮಾಜಿ ಸಚಿವ ಏಕನಾಥ ಖಡ್ಸೆ ಅವರ ಮನೆಗೆ ಅನಾಮಿಕ ವ್ಯಕ್ತಿಗಳು ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಗಾಂವ್ನ ರಮಾನಂದ ನಗರದಲ್ಲಿ ಮನೆ ಇದ್ದು, ಮನೆಯ ಬೀಗ ಒಡೆದಿರುವ ಹಾಗೂ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಮನೆಕೆಲಸ ವ್ಯಕ್ತಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಖಡ್ಸೆಯವರಿಗೆ ಆತ ಮಾಹಿತಿ ನೀಡಿದ್ದಾನೆ. ಖಡ್ಸೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಮಾನಂದ ನಗರ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ದೌಡಾಯಿಸಿ, ಸ್ಥಳ ಪರಿಶೀಲನೆ ಮಾಡಿ ತನಿಖೆ ಪ್ರಾರಂಭಿಸಿದ್ದಾರೆ.
ಜಲಗಾಂವ್ನ ಮುಕ್ತನಗರ ಪ್ರದೇಶದಲ್ಲಿ ಖಡ್ಸೆ ವಾಸಿಸುತ್ತಿದ್ದರಿಂದ ಈ ಮನೆಗೆ ಬೀಗ ಹಾಕಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಏಕನಾಥ ಖಡ್ಸೆ ಅವರ ಸೊಸೆಯೂ, ಕೇಂದ್ರ ಸಚಿವೆಯೂ ಆಗಿದರುವ ರಕ್ಷಾ ಖಡ್ಸೆ ಅವರ ಪೆಟ್ರೋಲ್ ಪಂಪ್ನಲ್ಲಿ ಕಳ್ಳತನ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.