ADVERTISEMENT

ಎನ್‌ಆರ್‌ಸಿ, ಸಿಎಎ ಬಗ್ಗೆ ಅರ್ಥ ಮಾಡಿಕೊಳ್ಳಿ ಆಮೇಲೆ ಮಾತನಾಡಿ: ಜೂಹಿ ಚಾವ್ಲಾ

ಪಿಟಿಐ
Published 9 ಜನವರಿ 2020, 10:02 IST
Last Updated 9 ಜನವರಿ 2020, 10:02 IST
ಜೂಹಿ ಚಾವ್ಲಾ
ಜೂಹಿ ಚಾವ್ಲಾ   

ಮುಂಬೈ: ದೇಶವನ್ನು ನಿರಂತರವಾಗಿ ಟೀಕಿಸುವ ಬದಲು ಜನರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ತರಬೇಕು ಎಂದು ನಟಿ ಜೂಹಿ ಜಾವ್ಲಾ ಹೇಳಿದ್ದಾರೆ.

ಬುಧವಾರ ಮುಂಬೈಯಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೂಹಿ,ಪ್ರತಿಕ್ರಿಯಿಸಲೇ ಬೇಕು ಎಂಬ ನೆಪದಿಂದ ಕೆಲವರು ಪ್ರಶ್ನಿಸುತ್ತಾರೆ. ಅಂತವರಿಗೆ ಈ ಪರಿಸ್ಥಿತಿಯನ್ನು ಅರ್ಥ ಮಾಡಲು ಸಮಯ ಕೊಡಬೇಕು. ನಾವು ಕೆಲಸಕ್ಕೆ ಹೋಗುತ್ತೇವೆ. ಆ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಯೋಚಿಸುತ್ತೇವೆ. ಆಗ ಎಲ್ಲಿಯಾದರೂ, ಏನಾದರೂ ಘಟನೆ ಸಂಭವಿಸಿದರೆ ಮಾಧ್ಯಮದವರು ಬಂದು ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳುತ್ತಾರೆ. ಅಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ, ಅದು ನಮಗೆ ಅರ್ಥವಾಗಿರುವುದೂ ಇಲ್ಲ, ಆದರೂ ಪ್ರತಿಕ್ರಿಯಿಸುತ್ತಾರೆ.

ಎನ್‌ಆರ್‌ಸಿ ಅಥವಾ ಸಿಎಎ ಆಗಿರಲಿ ಅದನ್ನು ಜನರು ಅರ್ಥ ಮಾಡಿಕೊಳ್ಳಲಿ. ಅದು ಏನು ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿದೆ ಎಂಬುದರ ಬಗ್ಗೆ ತಿಳಿಯಲಿ.ವಿಭಜನೆಬಗ್ಗೆ ಜನರು ಮಾತನಾಡುತ್ತಾರೆ, ನಾವು ಯಾಕೆ ಒಂದಾಗುವ ಬಗ್ಗೆ ಮಾತನಾಡಬಾರದು?

ADVERTISEMENT

ಸರ್ಕಾರ ಏನು ಮಾಡುತ್ತಿದೆ? ಯಾಕೆ ಹೀಗೆ ಮಾಡುತ್ತಿದೆ ಎಂದು ಜನರು ಕೇಳುತ್ತಿದ್ದಾರೆ. ಆದರೆ ನೀವು ಇನ್ನೊಬ್ಬರತ್ತ ಬೆರಳು ತೋರಿಸಿದರೆ ಮೂರು ಬೆರಳು ನಿಮ್ಮ ಕಡೆ ತೋರಿಸುತ್ತದೆ. ನಾವು ಏನು ಮಾಡುತ್ತಿದ್ದೇವೆ? ಸಮಾಧಾನದಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ಜೂಹಿ ಚಾವ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.