ADVERTISEMENT

ಸಾಮಾನ್ಯ ಜನತೆಯೇ ಬಿಜೆಪಿಯ ಆಪ್ತರು: ಕಾಂಗ್ರೆಸ್‌ಗೆ ನಿರ್ಮಲಾ ಸೀತಾರಾಮನ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 6:29 IST
Last Updated 13 ಫೆಬ್ರುವರಿ 2021, 6:29 IST
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)   

ನವದೆಹಲಿ: ನಮ್ಮ ಆಪ್ತರು ಯಾರು? ದೇಶದ ಸಾಮಾನ್ಯ ಜನತೆಯೇ ನಮ್ಮ ಆಪ್ತರು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಭಾರತದ ಸಾಮರ್ಥ್ಯದ ಮೇಲೆ ಕಾಂಗ್ರೆಸ್‌ಗೆ ನಂಬಿಕೆಯಿಲ್ಲ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ನಿರಂತರ ಆರೋಪ ಮಾಡುವವರಿಗೆ ‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಕಾಣಿಸುವುದಿಲ್ಲ. ಈ ಯೋಜನೆ ಸ್ನೇಹಿತರಿಗೆ ತಲುಪುವುದಿಲ್ಲ ನೋಡಿ ಎಂದು ನಿರ್ಮಲಾ ವ್ಯಂಗ್ಯವಾಡಿದ್ದಾರೆ.

‘ಸ್ನೇಹಿತರು ಎಲ್ಲಿದ್ದಾರೆ? ಅವರು ಬಹುಶಃ ಜನ ತಿರಸ್ಕರಿಸಿರುವ ಪಕ್ಷದ ನೆರಳಿನ ಹಿಂದೆ ಅಡಗಿದ್ದಾರೆ. ಬಂದರೊಂದನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿದವರ ನೆರಳಿನ ಹಿಂದೆ ಇದ್ದಾರೆ. ಅವರು ಆಹ್ವಾನಿಸಿದ್ದರಷ್ಟೇ, ಮುಕ್ತವಾದ ಟೆಂಡರ್ ಇಲ್ಲ, ಜಾಗತಿಕ ಟೆಂಡರ್‌ಗಳನ್ನೂ ಕರೆದಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.

‘ಹೊಸ ಕೃಷಿ ಕಾಯ್ದೆಗಳ ಮೂಲಕ ತಮ್ಮ ಸ್ನೇಹಿತರಿಗೆ ಮುಕ್ತ ಮಾರ್ಗ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.