ಡೆಹ್ರಾಡೂನ್: ತಾಪಮಾನ ಏರಿಕೆಯಿಂದಾಗಿ ಉತ್ತರಾಖಂಡದ ವಿವಿಧೆಡೆ 60ಕ್ಕೂ ಹೆಚ್ಚು ಕಾಡ್ಗಿಚ್ಚಿನ ಹೊಸ ಪ್ರಕರಣಗಳು ವರದಿಯಾಗಿವೆ.
‘ರಾಜ್ಯದಲ್ಲಿ ಈ ವರ್ಷವೇ 900ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಸೋಮವಾರ ಒಂದೇ ದಿನ ರಾಜ್ಯ ಬೇರೆ ಬೇರೆ ಭಾಗದಲ್ಲಿ 64 ಕಾಡ್ಗಿಚ್ಚು ಪ್ರಕರಣ ವರದಿಯಾಗಿದೆ’ ಎಂದು ಮುಖ್ಯ ಅರಣ್ಯ ರಕ್ಷಣಾ ಅಧಿಕಾರಿ ಪಿ.ಕೆ ಸಿಂಗ್ ಹೇಳಿದ್ದಾರೆ.
‘ಇಲ್ಲಿಯವರೆಗೆ ಹಾನಿಗೊಳಗಾದ ಒಟ್ಟು ಪ್ರದೇಶ 924 ಹೆಕ್ಟೇರ್. ಇರದಲ್ಲಿ 719.5 ಹೆಕ್ಟೇರ್ ಅಷ್ಟು ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.