ನಾಯಕ್ ಅವರು, ಆಗಸ್ಟ್ 8ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಂ.ರಾಧಕೃಷ್ಣ ರೆಡ್ಡಿ ಎಂಬಾತ ಆಗಸ್ಟ್ 9 ಮತ್ತು 10ರ ಮಧ್ಯರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
‘ಆತ (ರೋಗಿಯು) ಆಗಸ್ಟ್ 9 ಮತ್ತು 10ರ ಮಧ್ಯರಾತ್ರಿ ವೇಳೆ ಆಸ್ಪತ್ರೆಯ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧಪ್ರಕರಣ ದಾಖಲಾಗಿದ್ದು, ಅದೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಾತ್ರವಲ್ಲದೆ ಅದೇ ದಿನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಆತನ ಸಂಬಂಧಿಕರು ಶವವನ್ನು ನಿನ್ನೆ ಸಂಜೆಯೇ ತೆಗೆದುಕೊಂಡು ಹೋಗಿದ್ದಾರೆ. ನಾಯಿಗಳು ದೇಹವನ್ನು ತಿಂದಿವೆ ಎನ್ನಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.