ADVERTISEMENT

ರಾಜಸ್ಥಾನದಲ್ಲಿ ಬಸ್–ಟ್ರಕ್ ಅಪಘಾತ: ನಾಲ್ಕು ಪ್ರಯಾಣಿಕರು ಸಾವು, 20 ಜನರಿಗೆ ಗಾಯ

ಐಎಎನ್ಎಸ್
Published 14 ಅಕ್ಟೋಬರ್ 2023, 10:41 IST
Last Updated 14 ಅಕ್ಟೋಬರ್ 2023, 10:41 IST
ಅಪಘಾತ
ಅಪಘಾತ   

ಜೈಪುರ: ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಬಸ್–ಟ್ರಕ್ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ನಾಲ್ಕು ಮಂದಿ ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಂಬಾ ದಬ್ರಾ ಗ್ರಾಮದ ದೇವಾಲಯಕ್ಕೆ ಹೋಗಿದ್ದವರು ಬಸ್‌ನಲ್ಲಿದ್ದರು. ಈ ಬಸ್‌ ಪ್ರತಾಪಗಢ–ಬನ್‌ಸ್ವಾರ ಹೆದ್ದಾರಿಯಲ್ಲಿ ಕಚೋಟಿಯಾನ್‌ ಗ್ರಾಮದ ಸಮಿಪ ಸಂಚರಿಸುತ್ತಿದ್ದಾಗ ನಿಂತಿದ್ದ ಟ್ರಕ್‌ಗೆ ಡಿಕ್ಕಿಯಾಗಿದೆ ಎಂದು ಸುಹಾಗ್ಪುರ ಠಾಣಾಧಿಕಾರಿ ಇಂದ್ರಜಿತ್‌ ಮಾಹಿತಿ ನೀಡಿದ್ದಾರೆ.

ಗಾಯಗೊಂಡಿರುವ 20 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.