ಮುಂಬೈ(ಪಿಟಿಐ): ದೇಶದಾದ್ಯಂತ ಹಿಜಾಬ್ ಸೇರಿದಂತೆ ಇನ್ನಿತರ ವಿಚಾರಗಳ ಮೂಲಕ ಹೆಣ್ಣು ಮಕ್ಕಳನ್ನುಗುರಿಯಾಗಿಸಿಕೊಂಡಿರುವುದು ನಿಲ್ಲಬೇಕು ಎಂದು 2021ರ ಭುವನ ಸುಂದರಿ ಹರ್ನಾಜ್ ಸಂಧು ಅವರು ಕರೆ ನೀಡಿದ್ದಾರೆ. ಅಲ್ಲದೆ ಅವರ ಆಯ್ಕೆಯ ರೀತಿ ಬದುಕಲು ಬಿಡಿ ಎಂದು ಹೇಳಿದ್ದಾರೆ.
2021ರಲ್ಲಿ ಭುವನ ಸುಂದರಿ ಆಗಿ ಆಯ್ಕೆಯಾಗಿದ್ದಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾರ್ಚ್ 17ರಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು, ಹಿಜಾಬ್ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ಆಯೋಜಕರು, ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ ಎಂದು ವಿನಂತಿಸಿದರು.
ಆದರೆ ಈ ಪ್ರಶ್ನೆಗೆ ಉತ್ತರಿಸಿದ ಸಂಧು ಅವರು, 'ನೀವೇಕೆ ಹೆಣ್ಣು ಮಕ್ಕಳನ್ನು ಇಷ್ಟೊಂದು ಗುರಿಯಾಗಿಸುತ್ತೀರಿ ಎಂದು ಪ್ರಾಮಾಣಿಕವಾಗಿ ಕೇಳುತ್ತೇನೆ. ಈಗಲೂ ನೀವು ನನ್ನನ್ನು ಗುರಿಯಾಗಿಸಿಕೊಂಡಿದ್ದೀರಿ. ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳನ್ನು ಗುರುಯಾಗಿಸಿಕೊಳ್ಳಲಾಗಿದೆ. ಅವರಿಗೆ ಇಷ್ಟಬಂದಂತೆ ಬದುಕಲು ಬಿಟ್ಟು, ಅವರ ಗುರಿ ತಲುಪಲು ಅವಕಾಶ ನೀಡಿ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.