ಪಣಜಿ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನಿರ್ದೇಶಕ (ಸ್ಯಾಟ್ಕಾಂ– ಪೊ) ಹನುಮಂತರಾಯಪ್ಪ ಅವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಶುಕ್ರವಾರ ಭೇಟಿಯಾಗಿ, ರಾಜ್ಯದಲ್ಲಿ ಉಪಗ್ರಹ ಮೂಲಕ ಶಿಕ್ಷಣ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.
‘ಹನುಮಂತರಾಯಪ್ಪ ಅವರನ್ನು ಭೇಟಿಯಾದ ಸಾವಂತ್ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಇಸ್ರೊ ಸಹಯೋಗದೊಂದಿಗೆ ಉಪಗ್ರಹ ಮೂಲಕ ಶಿಕ್ಷಣ (ಎಜುಸ್ಯಾಟ್) ನೀಡುವ ಕುರಿತು ಚರ್ಚೆ ನಡೆಸಿದರು’ ಎಂದು ಗೋವಾ ಮುಖ್ಯಮಂತ್ರಿಗಳ ಕಚೇರಿ ವಕ್ತಾರರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.