ADVERTISEMENT

ಹೈದರಾಬಾದ್‌ನಲ್ಲಿ ಕರ್ನಾಟಕದ ಅಕ್ಕಸಾಲಿಗನ ಕೊಲೆ

ಪಿಟಿಐ
Published 19 ಜನವರಿ 2026, 13:52 IST
Last Updated 19 ಜನವರಿ 2026, 13:52 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹೈದರಾಬಾದ್‌: ಕರ್ನಾಟಕದ ಅಕ್ಕಸಾಲಿಗರೊಬ್ಬರನ್ನು ಅವರ ಸ್ನೇಹಿತನೇ ಸಾರ್ವಜನಿಕ ಸ್ಥಳದಲ್ಲಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನ ಶಮ್‌ಶೀರ್‌ಗಂಜ್‌ ರಸ್ತೆಯಲ್ಲಿ ನಡೆದಿದೆ.

ADVERTISEMENT

ಭಾನುವಾರ ರಾತ್ರಿ 9:50ಕ್ಕೆ ಈ ಘಟನೆ ನಡೆದಿದೆ. ಕೊಲೆಗೀಡಾದ ವ್ಯಕ್ತಿ 30 ವರ್ಷದವರಾಗಿದ್ದು, ಹೈದರಾಬಾದ್‌ನಲ್ಲಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದರು.  ‌‌‌

‘ಇಬ್ಬರು ವ್ಯಕ್ತಿಗಳು ಸೇರಿ ದಾಳಿ ಮಾಡಿದ್ದಾರೆ. ಅದರಲ್ಲಿ ಒಬ್ಬ ಮೃತ ವ್ಯಕ್ತಿಯ ಸ್ನೇಹಿತನೇ ಆಗಿದ್ದು, ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಆರೋಪಿಯು ಚಾಕು ಹಿಡಿದುಕೊಂಡು ಬೆದರಿಸಿದ್ದರಿಂದ ಸಂಬಂಧಿಕರಿಗೂ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ’ ಎಂದು ಪೋಲಿಸರು ಹೇಳಿದ್ದಾರೆ.

‘ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.