ADVERTISEMENT

ಲೋಕಸಭೆ: ಬಜೆಟ್‌ ಮೇಲಿನ ಚರ್ಚೆ ಆರಂಭ

ಪಿಟಿಐ
Published 10 ಫೆಬ್ರುವರಿ 2026, 16:04 IST
Last Updated 10 ಫೆಬ್ರುವರಿ 2026, 16:04 IST
ಲೋಕಸಭೆಯಿಂದ ಅಮಾನತುಗೊಂಡ ಕಾಂಗ್ರೆಸ್‌ ಪಕ್ಷದ ಸಂಸದರು ಸಂಸತ್‌ ಭವನದ ಮುಂದೆ ಹಿಡಿದಿದ್ದ ಪೋಸ್ಟರ್‌ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ವೀಕ್ಷಿಸಿದರು–ಪಿಟಿಐ ಚಿತ್ರ
ಲೋಕಸಭೆಯಿಂದ ಅಮಾನತುಗೊಂಡ ಕಾಂಗ್ರೆಸ್‌ ಪಕ್ಷದ ಸಂಸದರು ಸಂಸತ್‌ ಭವನದ ಮುಂದೆ ಹಿಡಿದಿದ್ದ ಪೋಸ್ಟರ್‌ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ವೀಕ್ಷಿಸಿದರು–ಪಿಟಿಐ ಚಿತ್ರ   

ನವದೆಹಲಿ: ಕಳೆದ ಹತ್ತು ದಿನಗಳಿಂದ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ– ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದ್ದ ಲೋಕಸಭೆಯಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಬಜೆಟ್‌ ಮೇಲಿನ ಚರ್ಚೆ ಆರಂಭಗೊಂಡಿತು.

ಬೆಳಿಗ್ಗೆ ಎರಡು ಬಾರಿ ಸದನ ಮುಂದೂಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಸದನ ಆರಂಭಗೊಳ್ಳುತ್ತಿದ್ದಂತೆಯೇ, ಸ್ಪೀಕರ್‌ ಪೀಠದಲ್ಲಿದ್ದ ಪ್ರಸಾದ್‌ ಟೆನ್ನೆಟಿ ಅವರು ಬಜೆಟ್‌ ಮೇಲೆ ಚರ್ಚೆಗೆ ಚಾಲನೆ ನೀಡಿದರು. 

ತಿರುವನಂತಪುರ ಸಂಸದ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಬಜೆಟ್‌ ಮೇಲೆ ಚರ್ಚೆ ಆರಂಭಿಸಿದರು. ಇದೇ ವೇಳೆ ವಿರೋಧ ಪಕ್ಷದ ಸದಸ್ಯರು ಸ್ಪೀಕರ್‌ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಕುರಿತ ನೋಟಿಸ್‌ ಸಲ್ಲಿಸಿದ್ದರಿಂದ ಸದನದಲ್ಲಿ  ಮತ್ತೆ ಗದ್ದಲ ಉಂಟಾಯಿತು.  ಇದರಿಂದ ಸದನವನ್ನು ಮತ್ತೆ ಮುಂದೂಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.