ADVERTISEMENT

ಕಲಾಪ: ಜೋಶಿ–ಸೋನಿಯಾ ಭೇಟಿ

ಪಿಟಿಐ
Published 7 ಜೂನ್ 2019, 18:24 IST
Last Updated 7 ಜೂನ್ 2019, 18:24 IST
ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಅಧಿವೇಶನಕ್ಕೆ ಸಹಕಾರ ಕೋರಿದರು. ಸಚಿವರಾದ ಅರ್ಜುನ್‌ ರಾಮ್‌ ಮೇಘವಾಲ್‌, ನರೇಂದ್ರ ಸಿಂಗ್‌ ತೊಮರ್‌ ಇದ್ದರು
ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಅಧಿವೇಶನಕ್ಕೆ ಸಹಕಾರ ಕೋರಿದರು. ಸಚಿವರಾದ ಅರ್ಜುನ್‌ ರಾಮ್‌ ಮೇಘವಾಲ್‌, ನರೇಂದ್ರ ಸಿಂಗ್‌ ತೊಮರ್‌ ಇದ್ದರು   

ನವದೆಹಲಿ: ಸಂಸತ್‌ ಕಲಾಪದ ಸುಗಮ ಕಾರ್ಯನಿರ್ವಹಣೆಗೆ ಪೂರಕವಾಗಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.

17ನೇ ಲೋಕಸಭೆ ಮೊದಲ ಅಧಿವೇಶನ ಜೂನ್ 17ರಂದು ಆರಂಭವಾಗಲಿದೆ.ಸಂಸತ್ ಅಧಿವೇಶನ ಜುಲೈ 26ರವರೆಗೂ ನಡೆಯಲಿದ್ದು, ಬಜೆಟ್ ಅನ್ನು ಜುಲೈ 5ರಂದು ಮಂಡಿಸಲಾಗುತ್ತದೆ.

‘ಈ ಭೇಟಿ ಔಪಚಾರಿಕ. ಸಂಸತ್ತಿನ ಸುಗಮ ಕಾರ್ಯ ನಿರ್ವಹಣೆಗೆ ನಾವು ಸಹಕಾರ ಕೋರಿದೆವು. ಆಡಳಿತ ಪಕ್ಷದಿಂದಲೂ ನಮಗೆ ಸಹಕಾರ ಬೇಕು ಎಂದು ಸೋನಿಯಾ ಕೋರಿದರು’ ಎಂದು ಜೋಶಿ ನಂತರ ತಿಳಿಸಿದರು.

ADVERTISEMENT

ವಿಪಕ್ಷಗಳಿಗೆ ಸರ್ಕಾರ ಎಲ್ಲ ಸಹಕಾರವನ್ನು ನೀಡುವುದಾಗಿ ನಾವು ಭರವಸೆ ನೀಡಿದೆವು ಎಂದು ತಿಳಿಸಿದರು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೊಮರ್‌ ಮತ್ತು ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಇದ್ದರು.

ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರದ ಉದ್ದೇಶದ ಭಾಗವಾಗಿ ಜೋಶಿ ಮತ್ತು ಸೋನಿಯಾ ಅವರ ಭೇಟಿ ನಡೆಯಿತು. ಸುಮಾರು 15 ನಿಮಿಷಗಳ ಕಾಲ ಅವರು ಮಾತುಕತೆ ನಡೆಸಿದ್ದಾರೆ.

ಜೋಶಿ ಈ ಹಿಂದೆ ರಾಜ್ಯಸಭೆಯಲ್ಲಿನ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಲೋಕಸಭೆಯಲ್ಲಿ ಡಿಎಂಕೆ ನಾಯಕ ಟಿ.ಆರ್.ಬಾಲು ಅವರನ್ನೂ ಭೇಟಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.