ADVERTISEMENT

ಮದ್ಯದಂಗಡಿ ಮೇಲೆ ಗ್ರೆನೆಡ್ ದಾಳಿ: ಒಬ್ಬ ಸಾವು, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2022, 16:08 IST
Last Updated 17 ಮೇ 2022, 16:08 IST
   

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ದೇವಾನ್‌ ಬಾಗ್‌ ಪ್ರದೇಶದಲ್ಲಿ ನೂತನವಾಗಿ ತೆರೆಯಲಾಗಿದ್ದ ಮದ್ಯದಂಗಡಿ ಮೇಲೆ ಮಂಗಳವಾರ ಶಂಕಿತ ಉಗ್ರರು ಗ್ರೆನೆಡ್‌ ಎಸೆದಿದ್ದು, ಘಟನೆಯಲ್ಲಿ ಅಂಗಡಿಯ ನೌಕರರೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

‘ಘಟನೆಯಲ್ಲಿ ವೈನ್‌ ಶಾಪ್‌ನ ನಾಲ್ವರು ಗಾಯಗೊಂಡಿದ್ದು, ತೀವ್ರ ಗಾಯಗೊಂಡಿದ್ದ ಒಬ್ಬರು ಮೃತಪಟ್ಟರು. ದಾಳಿಯ ನಂತರ ದೇವಾನ್‌ ಬಾಗ್‌ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸಿವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT