ADVERTISEMENT

ಮೇವು ಹಗರಣ: ಲಾಲು ಪ್ರಸಾದ್‌ಗೆಜಾಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 19:52 IST
Last Updated 22 ಏಪ್ರಿಲ್ 2022, 19:52 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ರಾಂಚಿ (ಪಿಟಿಐ): ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಸಿಬಿಐ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರಿಗೆ ಐದು ವರ್ಷ ಸಜೆ ವಿಧಿಸಿತ್ತು.

73 ವರ್ಷದ ಲಾಲು ಪ್ರಸಾದ್‌ ಫೆಬ್ರುವರಿಯಿಂದ ಜೈಲಿನಲ್ಲಿದ್ದಾರೆ. ಹೈಕೋರ್ಟ್‌ ಆದೇಶದ ಮಾಹಿತಿ ಕೆಳಹಂತದ ಕೋರ್ಟ್‌ಗೆ ಮಂಗಳವಾರ ತಲುಪಬಹುದು. ಬಳಿಕ ನಾವು ಜಾಮೀನು ಬಾಂಡ್‌ ಸಲ್ಲಿಸಿ ಬಿಡುಗಡೆಗೆ ಕ್ರಮವಹಿಸುತ್ತೇವೆ ಎಂದು ವಕೀಲ ಪ್ರಭಾತ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT