ADVERTISEMENT

ಕೇರಳದಲ್ಲಿ ಭಾರಿ ಮಳೆ: 5 ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್’ ಘೋಷಣೆ

ಪಿಟಿಐ
Published 28 ಜೂನ್ 2025, 14:18 IST
Last Updated 28 ಜೂನ್ 2025, 14:18 IST
<div class="paragraphs"><p>ಮಲಂಪುಳ ಅಣೆಕಟ್ಟಿನಿಂದ ಸೋಮವಾರ ನೀರನ್ನು ಹೊರಬಿಡಲಾಯಿತು&nbsp; </p></div>

ಮಲಂಪುಳ ಅಣೆಕಟ್ಟಿನಿಂದ ಸೋಮವಾರ ನೀರನ್ನು ಹೊರಬಿಡಲಾಯಿತು 

   

–ಪಿಟಿಐ ಚಿತ್ರ

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದ್ದು, ರಾಜ್ಯದ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶನಿವಾರ ‘ಆರೆಂಜ್‌ ಅಲರ್ಟ್’ ಘೋಷಿಸಿತ್ತು. 

ADVERTISEMENT

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಈಗಾಗಲೇ ವಯನಾಡ್‌ ಜಿಲ್ಲೆಯ ಬಾಣಸುರ ಸಾಗರ್ ಮತ್ತು ಪಟ್ಟಣಂತಿಟ್ಟ ಜಿಲ್ಲೆಯ ಮುಯಿಯಾರ್‌ ಅಣೆಕಟ್ಟಿನ ಗೇಟಗಳನ್ನು ತೆರೆಯಲಾಗಿದೆ. ಮಲಂಪುಳ ಸೇರಿದಂತೆ ಇನ್ನೂ ಹಲವಾರು ಅಣೆಕಟ್ಟುಗಳನ್ನು ಶನಿವಾರ ತೆರೆಯಲಾಗಿದೆ.

ನೀರಿನ ಮಟ್ಟ 136 ಅಡಿಗ ಏರಿಕೆಯಾದರೆ ಮುಲ್ಲಪೆರಿಯರ್‌ ಅಣೆಕಟ್ಟಿನಿಂದ ನೀರನ್ನು ಹೊರಬಿಡುವುದಾಗಿ ತಮಿಳುನಾಡಿನ ಅಧಿಕಾರಿಗಳು ಸೂಚಿಸಿರುವುದರಿಂದ ಕೇರಳದ ತಗ್ಗುಪ್ರದೇಶಗಳಲ್ಲಿನ 883 ಕುಟುಂ‌ಬಗಳ 3,220 ಜನರ ಸ್ಥಳಾಂತರಕ್ಕೆ ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.