ನವದೆಹಲಿ: ಕರ್ನಾಟಕದ ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಸುತ್ತಲಿನ ವಿವಾದವು ಅರಾಜಕತೆಯನ್ನು ಹರಡುವ ಕಾರ್ಯಸೂಚಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೇಳಿಕೊಂಡಿದೆ.
ಪರಿಷತ್ತಿನ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರ ಹೇಳಿಕೆಯನ್ನು ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಬಿಡುಗಡೆ ಮಾಡಿದ್ದಾರೆ.
ಹಿಜಾಬ್ ಸುತ್ತಲಿನ ವಿವಾದವನ್ನು ‘ಹಿಜಾಬ್ ಜಿಹಾದ್’ ಎಂದು ವಿಎಚ್ಪಿ ವ್ಯಾಖ್ಯಾನಿಸಿದೆ.
‘ಪಿಎಫ್ಐನಂತಹ ಜಿಹಾದಿ ಸಂಘಟನೆಗಳು ಇಡೀ ಕರ್ನಾಟಕದಲ್ಲಿ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ದೊಡ್ಡ ಪಿತೂರಿಯನ್ನು ಯೋಜಿಸುತ್ತಿವೆ’ ಎಂದು ವಿಎಚ್ಪಿ ತಿಳಿಸಿದೆ.
ಬಾಗಲಕೋಟೆ ಸೇರಿದಂತೆ ಇತರಕಡೆ ನಡೆದ ಕಲ್ಲು ತೂರಾಟ ಇದಕ್ಕೆ ನೇರ ಸಾಕ್ಷಿಯಾಗಿದೆ ಎಂದೂ ಹೇಳಿಕೆಯಲ್ಲಿ ವಿಎಚ್ಪಿ ದಾಖಲಿಸಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.