ಹೈದರಾಬಾದ್: ತಂಗಿಯುಅನ್ಯಧರ್ಮೀಯ ವ್ಯಕ್ತಿಯನ್ನುವಿವಾಹವಾಗಿರುವುದನ್ನು ವಿರೋಧಿಸಿದಸ್ವಂತಅಣ್ಣ, ಆಕೆಯ ಪತಿಯನ್ನು (ಅಂತರ್ಧರ್ಮೀಯ ವ್ಯಕ್ತಿಯನ್ನು)ಬರ್ಬರವಾಗಿ ‘ಮರ್ಯಾದೆಗೇಡು ಹತ್ಯೆ’ ಮಾಡಿರುವ ಶಂಕಿತ ಪ್ರಕರಣ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರೂರ್ನಗರದಲ್ಲಿ ಈ ಘಟನೆ ಬುಧವಾರ ರಾತ್ರಿ ನಡೆದಿದೆ. ಸುಮಾರು 20ರ ಹರೆಯದ ವ್ಯಕ್ತಿ ತನ್ನ ಪತ್ನಿ ಜತೆಗೆ ಸ್ಕೂಟರ್ನಲ್ಲಿ ಹೋಗುತ್ತಿರುವಾಗ, ಮಹಿಳೆಯ ಅಣ್ಣ ಮತ್ತು ಆತನ ಸಂಬಂಧಿಕರುರಸ್ತೆಯಲ್ಲಿ ಸ್ಕೂಟರ್ ಅಡ್ಡಗಟ್ಟಿ ಸಾರ್ವಜನಿಕರ ಸಮ್ಮುಖದಲ್ಲೇ ಆತನಿಗೆ ಚಾಕುವಿನಿಂದ ಇರಿದು, ಕಬ್ಬಿಣದ ಸರಳಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನಾವಿಬ್ಬರು ಅನ್ಯಧರ್ಮಗಳಿಗೆ ಸೇರಿದ್ದು, ನಮಗೆ 11 ವರ್ಷಗಳಿಂದ ಪರಿಚಯವಿತ್ತು.ಪರಸ್ಪರ ಪ್ರೀತಿಸುತ್ತಿದ್ದೆವು. ಇದೇ ವರ್ಷದ ಜನವರಿಯಲ್ಲಿ ವಿವಾಹ ಮಾಡಿಕೊಂಡಿದ್ದೆವು. ನಮ್ಮ ಮದುವೆ ವಿರೋಧಿಸಿ ಐವರು ನನ್ನ ಪತಿ ಮೇಲೆ ದಾಳಿ ನಡೆಸಿದರು’ ಎಂದು ಮಹಿಳೆ ಟಿ.ವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ತಂದೆ, ‘ನನ್ನ ಸೊಸೆಯ ಅಣ್ಣ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ’ ಎಂದು ದೂರು ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಮಹಿಳೆಯ ಅಣ್ಣ ಮತ್ತು ಆತನ ಸಂಬಂಧಿಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಪಿ ಪಿ.ಶ್ರೀಧರ ರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.