ADVERTISEMENT

ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಶಿಂದೆ ಹೆಸರು ಸೂಚಿಸಿದ್ದು ನಾನೇ: ಫಡಣವೀಸ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 13:55 IST
Last Updated 6 ನವೆಂಬರ್ 2022, 13:55 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ಅವರ ಹೆಸರನ್ನು ಬಿಜೆಪಿ ನಾಯಕತ್ವಕ್ಕೆ ಸೂಚಿಸಿದ್ದು ನಾನೇ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.

ಉಪ ಮುಖ್ಯಮಂತ್ರಿ ಆಗುವಂತೆ ಪಕ್ಷದ ನಾಯಕರು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಆದರೆ, ಪಕ್ಷದ ಉನ್ನತ ನಾಯಕರು ನನಗೆ ಮನವರಿಕೆ ಮಾಡಿದರು ಎಂದರು.

‘ನೀವು ನನ್ನನ್ನು ಕೇಳಿದರೆ, ಇಂದು ತೃಪ್ತಿ ಹೊಂದಿದ್ದೇನೆ. ಶಿಂಧೆ ಅವರು ಎಂದಿಗೂ ನನ್ನನ್ನು ಉಪ ಮುಖ್ಯಮಂತ್ರಿ ಎಂದು ಕಡೆಗಣಿಸಲಿಲ್ಲ.ನಾವು ದೀರ್ಘಕಾಲದಿಂದ ಕೆಲಸ ಮಾಡಿದ್ದೇವೆ’ ಎಂದು ಫಡಣವೀಸ್ ಹೇಳಿದರು.

ADVERTISEMENT

ಶನಿವಾರ ಸಂಜೆ ಮಾಧ್ಯಮದವರ ಜತೆ ಮಾತನಾಡಿದ ಫಡಣವೀಸ್‌, ‘ಇಡೀ ಘಟನೆ ಟಿ20 ಪಂದ್ಯಗಳಂತೆ ನಡೆಯಿತು.ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಆಘಾತಕಾರಿಯಲ್ಲ ಸಂಗತಿಯಲ್ಲ. ನನ್ನ ಸಮಾಲೋಚನೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.