ADVERTISEMENT

ಒಡಿಶಾ: ಡಿಸ್ಟಿಲರಿ ಮೇಲೆ ದಾಳಿ –ಅಪಾರ ಹಣ ವಶ

ಪಿಟಿಐ
Published 7 ಡಿಸೆಂಬರ್ 2023, 16:13 IST
Last Updated 7 ಡಿಸೆಂಬರ್ 2023, 16:13 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ಭುವನೇಶ್ವರ: ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯೊಂದರ ಕಚೇರಿ ಮೇಲೆ ದಾಳಿ ನಡೆಸಿದ್ದು, ಸುಮಾರು ₹ 30 ಕೋಟಿಯಿಂದ 50 ಕೋಟಿ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ದಾಳಿ ನಡೆಸಲಾಗಿದೆ. ನಿಖರವಾದ ಮೊತ್ತ ಗೊತ್ತಾಗಿಲ್ಲ. ಯಂತ್ರದ ಮೂಲಕ ಹಣ ಎಣಿಕೆ ಮಾಡಲಾಗುತ್ತಿದೆ. ಭುವನೇಶ್ವರ, ಬೊಲಾಂಗಿರ್, ಸಂಬಾಲ್‌ಪುರ್, ರಾಂಚಿ ಹಾಗೂ ಕೋಲ್ಕತ್ತದಲ್ಲಿ ದಾಳಿ ನಡೆದಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT