ADVERTISEMENT

Photos| ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ಗೆ ಕುಟುಂಬಸ್ಥರು, ವಾಯುಪಡೆಯ ಅಂತಿಮ ನಮನ

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಎಂಬಲ್ಲಿ ಪತನವಾಗಿದ್ದ ವಾಯು ಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದು, ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಬುಧವಾರ ನಿಧನರಾದರು. ವರುಣ್‌ ಸಿಂಗ್‌ ಅವರಿಗೆ ಗುರುವಾರ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು, ಸೇನಾ ಪಡೆಗಳ ಅಧಿಕಾರಿಗಳು ವರುಣ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದರು.ಕೂನೂರಿನಲ್ಲಿ ನಡೆದ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 12:30 IST
Last Updated 16 ಡಿಸೆಂಬರ್ 2021, 12:30 IST
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಎಂಬಲ್ಲಿ ಪತನವಾಗಿದ್ದ ವಾಯು ಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದು, ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಬುಧವಾರ ನಿಧನರಾದರು.  ವರುಣ್‌ ಸಿಂಗ್‌ ಅವರಿಗೆ ಗುರುವಾರ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಕುಟುಂಬ ಸದಸ್ಯರಾದ ಗೀತಾಂಜಲಿ ಸಿಂಗ್, ಆರಾಧ್ಯ ಸಿಂಗ್ ಮತ್ತು ವೃದ್ಧಿಮಾನ್ ಸಿಂಗ್ ಅವರು ವರುಣ್‌ ಸಿಂಗ್‌ ಅವರಿಗೆ ಪುಷ್ಪ ನಮನ ಅರ್ಪಿಸಿದರು. (ಪಿಟಿಐ)
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಎಂಬಲ್ಲಿ ಪತನವಾಗಿದ್ದ ವಾಯು ಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದು, ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಬುಧವಾರ ನಿಧನರಾದರು. ವರುಣ್‌ ಸಿಂಗ್‌ ಅವರಿಗೆ ಗುರುವಾರ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಕುಟುಂಬ ಸದಸ್ಯರಾದ ಗೀತಾಂಜಲಿ ಸಿಂಗ್, ಆರಾಧ್ಯ ಸಿಂಗ್ ಮತ್ತು ವೃದ್ಧಿಮಾನ್ ಸಿಂಗ್ ಅವರು ವರುಣ್‌ ಸಿಂಗ್‌ ಅವರಿಗೆ ಪುಷ್ಪ ನಮನ ಅರ್ಪಿಸಿದರು. (ಪಿಟಿಐ)   
ಬೆಂಗಳೂರಿನಲ್ಲಿ ಅಂತಿಮ ನಮನ ಕಾರ್ಯ ಪೂರ್ಣಗೊಂಡ ಬಳಿಕ ವರುಣ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಭೋಪಾಲ್‌ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. (ಪಿಟಿಐ)
ಸೇನಾ ಸಿಬ್ಬಂದಿಯಿಂದ ವರುಣ್‌ ಸಿಂಗ್‌ ಅವರಿಗೆ ಗೌರವ ಸಮರ್ಪಣೆ (ಪಿಟಿಐ)
ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಯಲಹಂಕದ ಏರ್‌ ಫೋರ್ಸ್‌ ಸ್ಟೇಷನ್‌ಗೆ ಆಗಮಿಸಿದ್ದ ಕುಟುಂಬಸ್ಥರು (ಪಿಟಿಐ)
ಸೇನಾ ಸಿಬ್ಬಂದಿಯಿಂದ ವರುಣ್‌ ಸಿಂಗ್‌ ಅವರಿಗೆ ಗೌರವ ಸಮರ್ಪಣೆ (ಪಿಟಿಐ)
ದುಃಖದಲ್ಲಿ ಕುಟುಂಬಸ್ಥರು, ಸ್ನೇಹಿತರು (ಪಿಟಿಐ)
ಕರ್ನಾಟಕ ರಾಜ್ಯಪಾಲ ತಾವರ್‌ ಚಂದ್‌ ಗೆಹಲೋತ್‌ ಅವರಿಂದ ಪುಷ್ಪ ನಮನ
ವರುಣ್‌ ಸಿಂಗ್‌ ತಂದೆ ನಿವೃತ್ತ ಕೊಲೊನೆಲ್‌ ಪಿಕೆ ಸಿಂಗ್‌ ಅವರಿಂದ ಅಂತಿಮ ನಮನ (ಪಿಟಿಐ)
ಕುಟುಂಬ ಸದಸ್ಯರಿಂದ ವಿದಾಯ ( ಪಿಟಿಐ)
ಜೀವನ್ಮರಣ ಹೋರಾಟ ನಡೆಸಿ ಇಹಲೋಕ ತ್ಯಜಿಸಿದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ಗೆ ಕುಟುಂಬಸ್ಥರು, ಸ್ನೇಹಿತರ ಅಂತಿಮ ನಮನ (ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.