ADVERTISEMENT

₹ 20ಕ್ಕಾಗಿ ವಾಗ್ವಾದ: ಮೂವರು ಗ್ರಾಹಕರಿಂದ ಇಡ್ಲಿ ಮಾರುವವನ ಕೊಲೆ

ಪಿಟಿಐ
Published 6 ಫೆಬ್ರುವರಿ 2021, 6:05 IST
Last Updated 6 ಫೆಬ್ರುವರಿ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: ₹ 20ಕ್ಕಾಗಿ ಆರಂಭಗೊಂಡ ಜಗಳ, ಇಡ್ಲಿ ಮಾರಾಟ ಮಾಡುವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಶನಿವಾರ ನಡೆದಿದೆ.

ವೀರೇಂದ್ರ ಯಾದವ್‌ ಕೊಲೆಯಾದ ವ್ಯಕ್ತಿ. ಯಾದವ್‌ ಇಲ್ಲಿನ ಮೀರಾ ರೋಡ್‌ನಲ್ಲಿ ಇಡ್ಲಿ ಮಾರಾಟದ ಅಂಗಡಿ ನಡೆಸುತ್ತಿದ್ದರು.

ಅಂಗಡಿಗೆ ಬಂದ ಮೂವರು ಗ್ರಾಹಕರು, ತಮಗೆ ₹ 20 ನೀಡುವುದು ಬಾಕಿ ಇದೆ ಎಂದು ಹೇಳಿ ಯಾದವ್‌ನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದು ವಿಕೋಪಕ್ಕೆ ಹೋಗಿದೆ. ಕೈಕೈ ಮಿಲಾಸಿದ ನಂತರ, ಮೂವರು ಸೇರಿ ಆತನನ್ನು ನೂಕಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೆಳಗೆ ಬಿದ್ದ ಯಾದವ್‌ ತಲೆಗೆ ಗಂಭೀರ ಗಾಯವಾಯಿತು. ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು’ ಎಂದು ಪೊಲೀಸರು ತಿಳಿಸಿದರು. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.