ADVERTISEMENT

ರಾಜಸ್ಥಾನ| ಗಡಿಯಲ್ಲಿ ಒಳನುಸುಳುಕೋರನ ಹತ್ಯೆ

ಪಿಟಿಐ
Published 25 ಡಿಸೆಂಬರ್ 2024, 12:47 IST
Last Updated 25 ಡಿಸೆಂಬರ್ 2024, 12:47 IST
.
.   

ಜೈಪುರ: ದೇಶದ ಒಳಗೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ನುಸುಳುಕೋರನನ್ನು ಗಡಿ ಭದ್ರತಾ ಪಡೆಯ ಯೋಧರು ಮಂಗಳವಾರ ರಾತ್ರಿ ಹತ್ಯೆ ಮಾಡಿದ್ದಾರೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಕೇಸರಿಸಿಂಹಪುರ ಪ್ರದೇಶದಲ್ಲಿನ ಭಾರತ–ಪಾಕಿಸ್ತಾನದ ಗಡಿಯಲ್ಲಿ ಶಂಕಿತನೊಬ್ಬ ಒಳನುಸುಳಲು ಮುಂದಾಗಿದ್ದ. ಬಿಎಸ್‌ಎಫ್‌ ಸಿಬ್ಬಂದಿ ಎಚ್ಚರಿಸಿದರೂ ಆತ ಕಿವಿಗೊಡದಿದ್ದಾಗ, ಸೈನಿಕರು ಹತ್ಯೆ ಮಾಡಿದರು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಗೌರವ್‌ ಯಾದವ್‌ ಬುಧವಾರ ತಿಳಿಸಿದ್ದಾರೆ.

ಮೃತನ ಬಳಿಯಿದ್ದ ಪಾಕಿಸ್ತಾನದ ಕರೆನ್ಸಿ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.