ADVERTISEMENT

ಹಿಂದೂಗಳ ಪರವಾಗಿಯೇ ಕಾಶಿ, ಮಥುರಾ ವಿವಾದಗಳು ಇತ್ಯರ್ಥಗೊಳ್ಳಬೇಕು: ವಿನಯ್‌ ಕಟಿಯಾರ್

ಪಿಟಿಐ
Published 1 ಅಕ್ಟೋಬರ್ 2020, 14:46 IST
Last Updated 1 ಅಕ್ಟೋಬರ್ 2020, 14:46 IST
ವಿನಯ್‌ ಕಟಿಯಾರ್‌
ವಿನಯ್‌ ಕಟಿಯಾರ್‌   

ನವದೆಹಲಿ: ‘ಕಾಶಿ ಹಾಗೂ ಮಥುರಾ ವಿವಾದಗಳನ್ನೂ ಹಿಂದೂಗಳ ಪರವಾಗಿಯೇ ಇತ್ಯರ್ಥಗೊಳಿಸಬೇಕು’ ಎಂದು ಬಿಜೆಪಿ ನಾಯಕ ವಿನಯ್‌ ಕಟಿಯಾರ್‌ ಗುರುವಾರ ಹೇಳಿದರು.

‘ಈ ವಿವಾದಾಸ್ಪದ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರವನ್ನು ಸಂತರೇ ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು. ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳು ಇರುವ ನಿವೇಶಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು' ಎಂದು ಹಲವು ಹಿಂದೂಪರ ಸಂಘಟನೆಗಳು ಬೇಡಿಕೆ ಇರಿಸಿವೆ.

‘ನಾನು ಸೇರಿದಂತೆ ಹಲವು ಬಿಜೆಪಿ ನಾಯಕರು ಬಾಬರಿ ಮಸೀದಿ ಧ್ವಂಸದ ಹಿಂದೆ ಇದ್ದೆವು ಎನ್ನುವ ಆರೋಪಗಳನ್ನು ಜನರು ಮಾಡುತ್ತಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನಮ್ಮ ಮೇಲಿನ ಹೊರೆ ಇಳಿಸಿದೆ’ ಎಂದರು.

ADVERTISEMENT

ಮಸೀದಿ ಕಟ್ಟಡವನ್ನು ಕೆಡವದೇ ಹೇಗೆ ರಾಮ ಮಂದಿರ ನಿರ್ಮಾಣ ಸಾಧ್ಯ ಎಂದು ಪ್ರಶ್ನಿಸಿದ ವಿನಯ್‌, ‘ಅದನ್ನು ಹೇಗೆ ಕೆಡವಲಾಯಿತು ಎನ್ನುವುದು ಬೇರೆ ವಿಷಯ. ಆದರೆ ಆ ಕಟ್ಟಡ ಧ್ವಂಸವಾಗದೇ ಇದ್ದಿದ್ದರೆ, ಇಂದು ಅಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.