ADVERTISEMENT

ಜಮ್ಮು: ಹುತಾತ್ಮ ಯೋಧ ಕುಲದೀಪ್ ಚಂದ್‌ಗೆ ಗೌರವ ನಮನ

ಪಿಟಿಐ
Published 12 ಏಪ್ರಿಲ್ 2025, 14:18 IST
Last Updated 12 ಏಪ್ರಿಲ್ 2025, 14:18 IST
   

ಜಮ್ಮು/ ಹಮೀರಪುರ: ನೈ‌ಜ ನಿಯಂತ್ರಣ ರೇಖೆ ಸಮೀಪ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಸುಬೇದಾರ್‌ ಕುಲದೀಪ್‌ ಚಂದ್‌ ಅವರ ಪಾರ್ಥಿವ ಶರೀರಕ್ಕೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಶನಿವಾರ ಗೌರವ ನಮನ ಸಲ್ಲಿಸಿದರು.

ಚಂದ್‌ ಅವರು ಪತ್ನಿ, ಪುತ್ರಿ, ಪುತ್ರ ಮತ್ತು ವಯೋವೃದ್ಧ ಪೋಷಕರನ್ನು ಅಗಲಿದ್ದಾರೆ. ಹಿಮಾಚಲ ಪ್ರದೇಶದ ಸ್ವಗ್ರಾಮದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

‘ಕುಲದೀಪ್‌ ಚಂದ್‌ ಅವರ ಶೌರ್ಯ ಮತ್ತು ತ್ಯಾಗವು ಎಂದಿಗೂ ನಮ್ಮ ನೆನಪಿನಲ್ಲಿ ಉಳಿಯಲಿದೆ. ನೋವಿನಲ್ಲಿರುವ ಕುಟುಂಬಸ್ಥರ ಜೊತೆ ಇಡೀ ದೇಶ ಇರಲಿದೆ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಸಿನ್ಹಾ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.