ಬನಿಹಾಲ್/ಜಮ್ಮು: ರಂಬಾನ್ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಈ ಹೆದ್ದಾರಿಯಲ್ಲಿ ಮಗರಕೋಟ್ ಬಳಿ ಭೂಕುಸಿತವಾಗಿದೆ. ಇದರಿಂದ500ಕ್ಕೂ ಅಧಿಕ ಭಾರಿ ಮತ್ತು ಲಘು ವಾಹನಗಳು ಹೆದ್ದಾರಿಯ ವಿವಿಧ ಹಂತಗಳಲ್ಲಿ ಸ್ಥಗಿತವಾಗಿವೆ.
ಭೂಕುಸಿತದಿಂದಾಗಿ ಎಲ್ಲ ವಾಹನಗಳ ಚಾಲಕರಿಗೆ ಬನಿಹಾಲ್ ಅಥವಾ ರಂಬಾನ್ ಕಡೆಯಿಂದ ಹೋಗುವಂತೆ ಕೋರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.