ADVERTISEMENT

ಅಕ್ಟೋಬರ್‌ 17 ಕಾಂಗ್ರೆಸ್‌ಗೆ ಸೇರಲಿರುವ ಜಸ್ವಂತ್‌ ಸಿಂಗ್‌ ಪುತ್ರ ಮಾನವೇಂದ್ರ

ಪಿಟಿಐ
Published 16 ಅಕ್ಟೋಬರ್ 2018, 19:02 IST
Last Updated 16 ಅಕ್ಟೋಬರ್ 2018, 19:02 IST

ಜೈಪುರ: ಬಿಜೆಪಿ ಹಿರಿಯ ಮುಖಂಡ ಜಸ್ವಂತ್‌ ಸಿಂಗ್‌ ಅವರ ಪುತ್ರ, ಶಾಸಕ ಮಾನವೇಂದ್ರ ಸಿಂಗ್‌ ಅವರು ಬುಧವಾರ (ಅಕ್ಟೋಬರ್‌ 17) ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ.

ರಾಜಸ್ಥಾನದ ವಿಧಾನಸಭೆ ಚುನಾವಣೆಯ ಈ ಸಂದರ್ಭದಲ್ಲಿ ಮಾನವೇಂದ್ರ ಅವರ ಈ ನಿರ್ಧಾರ ರಾಜಕೀಯವಾಗಿಮಹತ್ವ ಪಡೆದಿದೆ.ಬಿಜೆಪಿ ತೊರೆಯುವುದಾಗಿ ಕಳೆದ ತಿಂಗಳು ಬಾರ್ಮೇರ್‌ನಲ್ಲಿ ನಡೆದ ಸ್ವಾಭಿಮಾನ ರ‍್ಯಾಲಿಯಲ್ಲಿ ಮಾನವೇಂದ್ರ ಅವರು ಪ್ರಕಟಿಸಿದ್ದರು.

‘ಮಾನವೇಂದ್ರ ಅವರು ತಮ್ಮ ಪತ್ನಿ ಚಿತ್ರಾ ಸಿಂಗ್‌ ಜೊತೆಗೆ ಬುಧವಾರ ನವದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಚಿನ್‌ ಪೈಲಟ್‌ ತಿಳಿಸಿದ್ದಾರೆ.

ADVERTISEMENT

‘ಮಾನವೇಂದ್ರ ಅವರ ನಿರ್ಧಾರವು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ರಾಜಕೀಯವಾಗಿ ಅವರು ತೆಗೆದುಕೊಂಡ ತಪ್ಪು ನಿರ್ಧಾರ ಇದು. ರಜಪೂತ ಸಮುದಾಯದ ಮತದಾರರು ಬಿಜೆಪಿ ಜೊತೆಗೇ ಇರಲಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.