ADVERTISEMENT

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಒಂದೇ ದಿನ ₹1 ಕೋಟಿ ಸಂಗ್ರಹ: ಕಪಿಲ್‌ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 10:08 IST
Last Updated 30 ಜೂನ್ 2022, 10:08 IST
ಕಪಿಲ್‌ ಮಿಶ್ರಾ
ಕಪಿಲ್‌ ಮಿಶ್ರಾ   

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೊಳಗಾದ ಟೈಲರ್‌ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ ₹1 ಕೋಟಿ ಹರಿದುಬಂದಿದೆ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಟ್ವೀಟ್‌ ಮಾಡಿದ್ದಾರೆ.

'ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಜೈ ಶ್ರೀ ರಾಮ್‌' ಎಂದು ಕಪಿಲ್‌ ಮಿಸ್ರಾ ಟ್ವೀಟ್‌ ಮಾಡಿದ್ದಾರೆ.

ಕನ್ಹಯ್ಯ ಲಾಲ್‌ ಅವರ ಕುಟುಂಬದ ಜೊತೆಗೆ ಹಿಂದೂಗಳೆಲ್ಲರೂ ನಿಂತಿದ್ದಾರೆ. ಕನ್ಹಯ್ಯ ಲಾಲ್‌ ಅವರನ್ನು ಕಾಪಾಡಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಈಶ್ವರ ಸಿಂಗ್‌ ಅವರಿಗೆ 25 ಲಕ್ಷ ಕೊಡುತ್ತೇವೆ ಎಂದು ಕಪಿಲ್‌ ಮಿಶ್ರಾ ಹೇಳಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ಇದುವರೆಗೆ ಒಟ್ಟು ₹1.40 ಕೋಟಿ ಸಂಗ್ರಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.