ADVERTISEMENT

ಕರ್ನಾಟಕ ಸರ್ಕಾರದಿಂದ ಮರಾಠಿಗರಿಗೆ ತಾರತಮ್ಯ: ಮಹಾರಾಷ್ಟ್ರದ ಸಚಿವ

ಪಿಟಿಐ
Published 22 ಡಿಸೆಂಬರ್ 2021, 13:28 IST
Last Updated 22 ಡಿಸೆಂಬರ್ 2021, 13:28 IST
ಏಕನಾಥ ಶಿಂಧೆ
ಏಕನಾಥ ಶಿಂಧೆ   

ಮುಂಬೈ: ‘ಛತ್ರಪತಿ ಶಿವಾಜಿಗೆ ಅಪಮಾನ ಮಾಡುವ ಕೃತ್ಯಕ್ಕೆ ಕ್ಷಮೆಯೇ ಇಲ್ಲ. ಕರ್ನಾಟಕ ಸರ್ಕಾರ ಅವರ ಪ್ರತಿಮೆಗೆ ಹೆಚ್ಚಿನ ಗೌರವ ನೀಡಬೇಕು’ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಪ್ರತಿಪಾದಿಸಿದ್ದಾರೆ.

ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದ ಬೆಂಗಳೂರು ಘಟನೆಯನ್ನು ಉಲ್ಲೇಖಿಸಿ ವಿಧಾನಪರಿಷತ್ತಿನಲ್ಲಿ ಹೇಳಿಕೆ ನೀಡಿದ ಅವರು, ಘಟನೆ ಖಂಡನಾರ್ಹ. ಕರ್ನಾಟಕ ಸರ್ಕಾರ ಎಂದಿಗೂ ಅಲ್ಲಿ ನೆಲೆಸಿರುವ ಮರಾಠಿಗರ ಬಗ್ಗೆ ತಾರತಮ್ಯ ನಿಲುವು ತಳೆದಿದೆ‘ ಎಂದು ಆರೋಪಿಸಿದರು.

‘ಪ್ರಧಾನ ಮಂತ್ರಿ ಮೋದಿ ಅವರೇ ಹಲವು ಬಾರಿ ಶಿವಾಜಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ಸರ್ಕಾರವು ಅವರಿಗೆ ಹೆಚ್ಚಿನ ಗೌರವ ನೀಡಬೇಕಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.