ADVERTISEMENT

ಖ್ಯಾತ ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ ನಿಧನ

ಪಿಟಿಐ
Published 3 ಆಗಸ್ಟ್ 2021, 11:09 IST
Last Updated 3 ಆಗಸ್ಟ್ 2021, 11:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಖ್ಯಾತ ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ (81) ಇಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

‘ಕೆಲವು ಸಮಯದಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ಶಾಸ್ತ್ರೀಯ ನೃತ್ಯ ನಾಟಕದಲ್ಲಿ ಖಳನಾಯಕನಂತಹ ‘ಚುವಣ್ಣ ತಡಿ’ (ಕೆಂಪು ಗಡ್ಡ) ಪಾತ್ರಗಳಿಂದ ಅವರು ಖ್ಯಾತಿ ಗಳಿಸಿದ್ದರು. ಅಲ್ಲದೆ ‘ವಟ್ಟಮುಡಿ’ ಮತ್ತು ‘ಪೆಂಕರಿ’ ಅಂತಹ ಪಾತ್ರಗಳನ್ನು ನಿರ್ವಹಿಸುವಲ್ಲಿ ಪರಿಣಿತಿಯನ್ನು ಪಡೆದಿದ್ದರು.

ADVERTISEMENT

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ರಾಜ್ಯ ಕಥಕ್ಕಳಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.