ತಿರುವನಂತಪುರ: ನಗರದಿಂದ30 ಕಿ.ಮೀ. ದೂರದಲ್ಲಿರುವ ಕೋಟೂರಿನ ಅರಣ್ಯ ಇಲಾಖೆಯ ಆನೆ ಪುನರ್ವಸತಿ ಕೇಂದ್ರದಲ್ಲಿರುವ ‘ಶ್ರೀಕುಟ್ಟಿ’ ಹೆಸರಿನ ಆನೆ ಮರಿಯು ಭಾನುವಾರ ಮೊದಲ ವರ್ಷದ ಜನ್ಮದಿನ ಆಚರಿಸಿಕೊಂಡಿತು.
ಇಲಾಖೆ ಸಿಬ್ಬಂದಿಯು ಅಕ್ಕಿ ಹಾಗೂ ರಾಗಿಯಿಂದ ತಯಾರಿಸಿದ್ದ ಕೇಕ್ ಅನ್ನು ಆನೆ ಮರಿಯು ತನ್ನ ಸೊಂಡಿಲಿನಿಂದ ಕತ್ತರಿಸಿದ್ದು ನೆರೆದಿದ್ದವರ ಗಮನ ಸೆಳೆಯಿತು.
ಕಳೆದ ವರ್ಷದ ನವೆಂಬರ್ನಲ್ಲಿ ಕೊಲ್ಲಂ ಜಿಲ್ಲೆಯ ತೇನ್ಮಲೆ ಸಮೀಪದ ಎಸ್ಟೇಟ್ವೊಂದರ ಬಳಿ ಈ ಮರಿ ಸಿಕ್ಕಿತ್ತು. ಆಗ ಅದಕ್ಕೆ ಒಂದು ತಿಂಗಳ ಪ್ರಾಯ. ಆಗ ಈ ಮರಿ ಅಶಕ್ತವಾಗಿತ್ತು. ಇದು ಬದುಕುವುದೇ ಅನುಮಾನ ಎಂದು ಪುನರ್ವಸತಿ ಕೇಂದ್ರದ ಸಿಬ್ಬಂದಿ ಭಾವಿಸಿದ್ದರು. ಆದರೆ ಈಗ ಶ್ರೀಕುಟ್ಟಿ ತುಂಬಾ ಆರೋಗ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.