ADVERTISEMENT

‘ಶ್ರೀಕುಟ್ಟಿ’ ಆನೆ ಮರಿಗೆ ಜನ್ಮದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 15:19 IST
Last Updated 9 ನವೆಂಬರ್ 2020, 15:19 IST
ತನ್ನ ಸೊಂಡಿಲಿನಿಂದ ಕೇಕ್‌ ಕತ್ತರಿಸಿದ ಶ್ರೀಕುಟ್ಟಿ 
ತನ್ನ ಸೊಂಡಿಲಿನಿಂದ ಕೇಕ್‌ ಕತ್ತರಿಸಿದ ಶ್ರೀಕುಟ್ಟಿ    

ತಿರುವನಂತಪುರ: ನಗರದಿಂದ30 ಕಿ.ಮೀ. ದೂರದಲ್ಲಿರುವ ಕೋಟೂರಿನ ಅರಣ್ಯ ಇಲಾಖೆಯ ಆನೆ ಪುನರ್ವಸತಿ ಕೇಂದ್ರದಲ್ಲಿರುವ ‘ಶ್ರೀಕುಟ್ಟಿ’ ಹೆಸರಿನ ಆನೆ ಮರಿಯು ಭಾನುವಾರ ಮೊದಲ ವರ್ಷದ ಜನ್ಮದಿನ ಆಚರಿಸಿಕೊಂಡಿತು.

ಇಲಾಖೆ ಸಿಬ್ಬಂದಿಯು ಅಕ್ಕಿ ಹಾಗೂ ರಾಗಿಯಿಂದ ತಯಾರಿಸಿದ್ದ ಕೇಕ್‌ ಅನ್ನು ಆನೆ ಮರಿಯು ತನ್ನ ಸೊಂಡಿಲಿನಿಂದ ಕತ್ತರಿಸಿದ್ದು ನೆರೆದಿದ್ದವರ ಗಮನ ಸೆಳೆಯಿತು.

ಕಳೆದ ವರ್ಷದ ನವೆಂಬರ್‌ನಲ್ಲಿ ಕೊಲ್ಲಂ ಜಿಲ್ಲೆಯ ತೇನ್‌ಮಲೆ ಸಮೀಪದ ಎಸ್ಟೇಟ್‌ವೊಂದರ ಬಳಿ ಈ ಮರಿ ಸಿಕ್ಕಿತ್ತು. ಆಗ ಅದಕ್ಕೆ ಒಂದು ತಿಂಗಳ ಪ್ರಾಯ. ಆಗ ಈ ಮರಿ ಅಶಕ್ತವಾಗಿತ್ತು. ಇದು ಬದುಕುವುದೇ ಅನುಮಾನ ಎಂದು ಪುನರ್ವಸತಿ ಕೇಂದ್ರದ ಸಿಬ್ಬಂದಿ ಭಾವಿಸಿದ್ದರು. ಆದರೆ ಈಗ ಶ್ರೀಕುಟ್ಟಿ ತುಂಬಾ ಆರೋಗ್ಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.