ADVERTISEMENT

ಕೇರಳ: ಟಿಡಿಬಿಯ ಮಾಜಿ ಅಧಿಕಾರಿ ಬೈಜುಗೆ ಜಾಮೀನು

ಪಿಟಿಐ
Published 27 ಫೆಬ್ರುವರಿ 2026, 14:57 IST
Last Updated 27 ಫೆಬ್ರುವರಿ 2026, 14:57 IST
<div class="paragraphs"><p>ಶಬರಿಮಲೆ ಚಿನ್ನ ಕಳವು ಪ್ರಕರಣ</p></div>

ಶಬರಿಮಲೆ ಚಿನ್ನ ಕಳವು ಪ್ರಕರಣ

   

ಕೊಲ್ಲಂ (ಪಿಟಿಐ): ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಟಿಡಿಬಿಯ ಮಾಜಿ ಅಧಿಕಾರಿ ಕೆ.ಎಸ್‌.ಬೈಜು ಅವರಿಗೆ ಇಲ್ಲಿನ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಕೊಲ್ಲಂನ ವಿಚಕ್ಷಣ ನ್ಯಾಯಾಲಯದ ನ್ಯಾಯಾಧೀಶರಾದ ಮೋಹಿತ್ ಸಿ.ಎಸ್‌ ಅವರು ತಿರುವಾಭರಣಂನ ಮಾಜಿ ಆಯುಕ್ತ ಬೈಜು ಅವರಿಗೆ ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣದಲ್ಲಿ ಜಾಮೀನು ನೀಡಿದ್ದಾರೆ.  ಬಂಧನವಾದ 90 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್‌ಐಟಿಯು ವಿಫಲವಾದ ಕಾರಣ ಜಾಮೀನು ನೀಡಿದ್ದಾರೆ.

ADVERTISEMENT

ಬೈಜು ಅವರು ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣದಲ್ಲಿ ಏಳನೇ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.